Advertisement

50 ಕೆ.ಜಿ ಗಾಂಜಾ ವಶ: ಇಬ್ಬರ ಬಂಧನ

11:36 AM Sep 15, 2020 | Suhan S |

ಬೆಂಗಳೂರು: ಆಂಧ್ರದವಿಶಾಖಪಟ್ಟಣಂನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದು,50ಕೆ.ಜಿ ಗಾಂಜಾ ವಶಪಡಿಸಿ ಕೊಂಡಿದ್ದಾರೆ.

Advertisement

ಕೊಳ್ಳೆಗಾಲ ಮೂಲದ ಎಂ ಸುರೇಶ, ವಿಶಾಖಪಟ್ಟಣದ ಬಂಟು ತಾತಾರಾಮ್‌ ಬಂಧಿತರು. ಸೆ.13ರಂದು ಕೊತ್ತನೊರಿನ ಬ್ರೂಕ್ಸ್‌ ಹೆವನ್‌ ಲೇಔಟ್‌ನಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿಆಧರಿಸಿ ಕಾರ್ಯಾಚರಣೆನಡೆಸಿಆರೋಪಿ ಸುರೇಶ್‌ನನ್ನು ಬಂಧಿಸಲಾಯಿತು. ಆತನ ಬಳಿಯಿದ್ದ 1,040 ಗ್ರಾಂ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿತ್ತು. ಆರೋಪಿ ಸುರೇಶ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡುವಿಚಾರಣೆನಡೆಸಿದಾಗ ಆತ ಸ್ನೇಹಿತ ಬಂಟು ತಾತಾರಾಮ್‌ ಬಗ್ಗೆ ಮಾಹಿತಿ ನೀಡಿದ. ಇದನ್ನು ಆಧರಿಸಿ ಇನ್ಸ್‌ಪೆಕ್ಟರ್‌ ಟಿ.ಎಂ ಧರ್ಮೇಂದ್ರ ನೇತೃತ್ವದ ತಂಡ, ಜೆ.ಪಿ ನಗರ ಎಂಟನೇ ಹಂತದ ಮಹೇಶ್ವರ ಲೇಔಟ್‌ನಲ್ಲಿಮನೆಯೊಂದರ ಮೂರನೇ ಮಹಡಿಯಲ್ಲಿ ಶೋಧ ನಡೆಸಲಾಯಿತು.ಈ ವೇಳೆ ಮನೆಯಲ್ಲಿದ್ದ ಬಂಟು ತಾತಾರಾಮ್‌ ಸಿಕ್ಕಿಬಿದ್ದ ಜತೆಗೆಆತ ಮನೆಯಲ್ಲಿ ಸಂಗ್ರಹಿಸಿದ್ದ 48 ಕೆ.ಜಿ 950 ಗ್ರಾಂಗಾಂಜಾ ವಶಪಡಿಸಿಕೊಳ್ಳಲಾಯಿತು. ಮೌಲ್ಯ ಸುಮಾರು 25 ಲಕ್ಷ ರೂ. ಮೌಲ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ದಂಧೆಯಲ್ಲಿರುವ ಆರೋಪಿಗಳು, ಆಂಧ್ರದ ವಿಶಾಖಪಟ್ಟಂನಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿಕೊಂಡು ಬರುತ್ತಿದ್ದರು. ಇಲ್ಲಿನ ಮನೆಯಲ್ಲಿ ಅಷ್ಟೂ ಪ್ರಮಾಣದ ಗಾಂಜಾವನ್ನು ಸಬ್‌ ಪೆಡ್ಲರ್‌ ಗಳ ಮೂಲಕಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳ ಜತೆ ಇನ್ನೂ ಹಲವರು ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆತಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next