Advertisement

ದಿಲ್ಲಿಯಿಂದ ಏಕಾಂಗಿಯಾಗಿ ಬೆಂಗಳೂರಿಗೆ ಬಂದು ತಾಯಿ ಮಡಿಲು ಸೇರಿದ 5 ವರ್ಷದ ವಿಹಾನ್!

04:05 PM May 25, 2020 | Nagendra Trasi |

ನವದೆಹಲಿ: ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿದ್ದು, ಇದೀಗ ಎರಡು ತಿಂಗಳ ಬಳಿಕ ದೇಶಾದ್ಯಂತ ವಿಮಾನ ಯಾನ ಪುನರಾರಂಭಗೊಂಡಿದ್ದು, ಸೋಮವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೃದಯಸ್ಪರ್ಶಿ ಘಟನೆಯೊಂದಕ್ಕೆ ಸಾಕ್ಷಿಯಾಯಿತು!

Advertisement

ಲಾಕ್ ಡೌನ್ ನಿಂದಾಗಿ ಕಳೆದ ಎರಡು ತಿಂಗಳಿನಿಂದ ದೆಹಲಿಯಲ್ಲಿ ಸಿಲುಕಿಕೊಂಡಿದ್ದ ಐದು ವರ್ಷದ ಪುಟಾಣಿ ವಿಹಾನ್ ಸೋಮವಾರ ಏಕಾಂಗಿಯಾಗಿ ವಿಮಾನವನ್ನೇರಿ ಬೆಂಗಳೂರಿಗೆ ಬಂದು ಮೂರು ತಿಂಗಳ ಬಳಿಕ ತಾಯಿಯ ಮಡಿಲು ಸೇರಿರುವ ಘಟನೆ ನಡೆದಿದೆ.

ವಿಹಾನ್ ಯಾನ ದೆಹಲಿ ಟು ಬೆಂಗಳೂರು:
ನನ್ನ ಐದು ವರ್ಷದ ಮಗ ವಿಹಾನ್ ದಿಲ್ಲಿಯಿಂದ ಒಬ್ಬನೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಮೂರು ತಿಂಗಳ ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದಾನೆ ಎಂದು ತಾಯಿ ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದರು. ವಿಹಾನ್ ಸ್ಪೆಷಲ್ ಕೆಟಗರಿಯಲ್ಲಿ ಪ್ರಯಾಣಿಕನಾಗಿ ಆಗಮಿಸಿದ್ದ. ಹಳದಿ ಬಣ್ಣದ ಬಟ್ಟೆ ತೊಟ್ಟಿದ್ದ ವಿಹಾನ್ ಮುಖದ ಮಾಸ್ಕ್ ಕೂಡಾ ಹಳದಿ ಬಣ್ಣದ್ದಾಗಿತ್ತು. ಕೈಯಲ್ಲಿ ಸ್ಪೆಷಲ್ ಕೆಟಗರಿ ಪ್ಲೇಕಾರ್ಡ್ ಹಿಡಿದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ.

ದೆಹಲಿಯಿಂದ ಆಗಮಿಸಿದ್ದ ಹಲವು ವಿಮಾನದಲ್ಲಿದ್ದ ನೂರಾರು ಪ್ರಯಾಣಿಕರಲ್ಲಿ ವಿಹಾನ್ ಶರ್ಮಾ ಕೂಡಾ ಒಬ್ಬನಾಗಿದ್ದ. ಕೊನೆಗೂ ಮೂರು ತಿಂಗಳ ಬಳಿಕ ದಿಲ್ಲಿಯಿಂದ ಒಬ್ಬಂಟಿಯಾಗಿ ಪ್ರಯಾಣಿಸಿ ಬೆಂಗಳೂರಿನಲ್ಲಿ ತಾಯಿಯ ಮಡಿಲು ಸೇರಿದ್ದಾನೆ.

ಶಾಲಾ ರಜೆಯ ಹಿನ್ನೆಲೆಯಲ್ಲಿ ವಿಹಾನ್ ಶರ್ಮಾ ದೆಹಲಿಯಲ್ಲಿರುವ ಅಜ್ಜ, ಅಜ್ಜಿ ಮನೆಗೆ ತೆರಳಿದ್ದ. ಆದರೆ ಕೋವಿಡ್ 19 ವೈರಸ್ ನಿಂದ ದಿಢೀರ್ ಎಂದು ಲಾಕ್ ಡೌನ್ ಘೋಷಣೆಯಾಗಿದ್ದರಿಂದ ವಿಹಾನ್ ಕಳೆದ ಎರಡು ತಿಂಗಳಿನಿಂದ ದಿಲ್ಲಿಯಲ್ಲಿಯೇ ವಾಸ್ತವ್ಯ ಹೂಡುವಂತಾಗಿತ್ತು. ಇದೀಗ ಇಂದು ವಿಮಾನಯಾನ ಆರಂಭಗೊಂಡ ಹಿನ್ನೆಲೆಯಲ್ಲಿ ವಿಹಾನ್ ಬೆಂಗಳೂರಿಗೆ ಆಗಮಿಸಿಸಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next