Advertisement

ಮಳೆ, ಪ್ರವಾಹ ಹಾನಿ; ಪರಿಹಾರಕ್ಕೆ 5 ಸಾವಿರ ಕೋಟಿ ನೆರವು ಬೇಕಿದೆ; ಬಿಎಸ್ ವೈ

09:51 AM Aug 09, 2019 | Nagendra Trasi |

ಬೆಳಗಾವಿ: ಇನ್ನೂ ಮೂರು ದಿನಗಳ ಕಾಲ ಜಿಲ್ಲೆಯಲ್ಲಿಯೇ ಇದ್ದು ಪರಿಸ್ಥಿತಿ ಅವಲೋಕಿಸುತ್ತೇನೆ. ಸಂತ್ರಸ್ತರಿಗೆ ಪರಿಹಾರನೀಡಲು ಸುಮಾರು 5000 ಸಾವಿರ ಕೋಟಿ ರೂಪಾಯಿ ನೆರವು ಬೇಕಿದೆ. ಈ ಸಂದರ್ಭದಲ್ಲಿ ದಾನಿಗಳು ದಯವಿಟ್ಟು ಸಹಕಾರ ನೀಡಬೇಕಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.

Advertisement

ಗರುವಾರ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಹಾರ ಶಿಬಿರಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಂತ್ರಸ್ತರಿಗೆ ಮನೆ ಸೇರಿದಂತೆ ಪರಿಹಾರ ನೀಡಲು ಸರಕಾರ ಸಿದ್ದವಿರುವುದಾಗಿ ತಿಳಿಸಿದರು.

ಪರಿಹಾರ ಕಾರ್ಯಕ್ಕೆ ಯಾವುದೇ ಕೊರತೆ ಇಲ್ಲ. ಪ್ರವಾಹದಲ್ಲಿ ಸಿಲುಕಿರುವ ಎಲ್ಲಾ ಸಂತ್ರಸ್ತರನ್ನು ರಕ್ಷಿಸುತ್ತೇವೆ. ರಕ್ಷಣೆಗಾಗಿ ಹೆಲಿಕಾಪ್ಟರ್, ಬೋಟ್ ವ್ಯವಸ್ಥೆ ಮಾಡಲು ಸಿದ್ದ ಎಂದರು.

ಮಳೆ, ಪ್ರವಾಹದಿಂದ ಸಂಭವಿಸಿದ ಹಾನಿಯಿಂದಾಗಿ ಸುಮಾರು 30 ಸಾವಿರ ಮನೆಗಳನ್ನು ಕಟ್ಟಬೇಕಾಗಿದೆ. ನಾನು ಇನ್ಫೋಸಿಸ್ ನ ಸುಧಾಮೂರ್ತಿಯವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next