Advertisement

ಬನಹಟ್ಟಿ ಲೋಕ ಅದಲಾತ್ 481 ಪ್ರಕರಣಗಳು ಇತ್ಯರ್ಥ

06:45 PM Mar 12, 2022 | Team Udayavani |

ರಬಕವಿ-ಬನಹಟ್ಟಿ: ಶನಿವಾರ ನಡೆದ ಬೃಹತ್ ಲೋಕ ಅದಾಲತ್ ಸಂದರ್ಭದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಒಟ್ಟು 481 ಪ್ರಕರಣಗಳು ಇತ್ಯರ್ಥಗೊಂಡಿವೆ. ಲೋಕ ಅದಾಲತ್ ಯಶಸ್ವಿಯಾಗಲು ವಕೀಲರ ಸಂಘದ ಸದಸ್ಯರ ಮತ್ತು ಕಕ್ಷಿದಾರರ ಸಹಕಾರ ಮುಖ್ಯವಾಗಿದೆ ಎಂದು ಸ್ಥಳೀಯ ಹಿರಿಯ ಶ್ರೇಣಿಯ ಸಿವಿಲ್  ನ್ಯಾಯಾಧೀಶ ಕಿರಣಕುಮಾರ ವಡಗೇರಿ ತಿಳಿಸಿದರು.

Advertisement

ಅವರು ಶನಿವಾರ ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಪತ್ರಿಕೆಯ ಜೊತೆಗೆ ಮಾತನಾಡಿ, ಹಿರಿಯ ಶ್ರೇಣಿಯ ಸಿವಿಲ್ ‍ನ್ಯಾಯಾಲಯದಲ್ಲಿ 76 ಮತ್ತು ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿಯ 765 ಪ್ರಕರಣಗಳು ಇತ್ಯರ್ಥಗೊಂಡಿವೆ.

ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಬಗೆ ಹರಿಸಿಕೊಂಡರೆ ಕಕ್ಷಿದಾರರ ಮಧ್ಯದಲ್ಲಿ ಸೌಹಾರ್ದತಯುತವಾದ ಸಂಬಂಧಗಳು ಉಳಿಯುತ್ತವೆ. ಆದ್ದರಿಂದ ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಿಗೊಳಿಸಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ನ್ಯಾಯಾಧೀಶ ವಡಗೇರಿ ತಿಳಿಸಿದರು.

ಈ ಸಂದರ್ಭದಲ್ಲಿ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ಸುಶ್ಮಾ ಟಿ.ಸಿ, ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಅರವಿಂದ ವ್ಯಾಸ್, ಜಿ.ಡಿ.ಪಾಟೀಲ, ಸುಜಾತಾ ನಿಡೋನಿ, ಶಿವಕುಮಾರ ಷಣ್ಮುಖ, ಕೆ.ಜಿ. ಸಾಲ್ಗುಡೆ, ಬಸವರಾಜ ಕುಂಬಾರ, ಶಶಿಧರ ಮೋಪಗಾರ, ಗಾಡಬೋಲೆ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next