Advertisement

ಮೆಗಾ ಲೋಕ ಅದಾಲತ್ ನಲ್ಲಿ 417 ಪ್ರಕರಣ ಇತ್ಯರ್ಥ: ನ್ಯಾಯಾಧೀಶ ಚೌವ್ಹಾಣ

08:40 PM Aug 16, 2021 | Team Udayavani |

ಚಿಕ್ಕೋಡಿ: ಚಿಕ್ಕೋಡಿ ವಿವಿಧ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ ಅದಾಲತದಲ್ಲಿ 417 ಹಳೆ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಲ್.ಎಸ್.ಚೌವ್ಹಾಣ ಹೇಳಿದರು.

Advertisement

ಸೋಮವಾರ ನ್ಯಾಯಾಲಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಚಿಕ್ಕೋಡಿ ವಿವಿಧ ಐದು ನ್ಯಾಯಾಲಯದಲ್ಲಿ 2614 ಪ್ರಕರಣಗಳು ರಾಜಿಯಾಗಬಹುದಾದ ಪ್ರಕರಣ ಎಂದು ಗುರ್ತಿಸಿಕೊಳ್ಳಲಾಗಿತ್ತು. ಅದರ ಪೈಕಿ 417 ಪ್ರಕರಣಗಳು ರಾಜಿ ಸಂಧಾನದ ಮೂಲಕ ಲೋಕ ಅದಾಲತದಲ್ಲಿ ಇತ್ಯರ್ಥಗೊಂಡಿವೆ ಎಂದರು.

417 ಪ್ರಕರಣದಲ್ಲಿ 30.80 ಕೋಟಿ ರೂ. ವಸೂಲು ಮಾಡಲಾಗಿದೆ. ಎಂಟು ಪ್ರಕರಣಗಳು ವರ್ಚುವಲ್ ವಿಡಿಯೋ ಮೂಲಕ ಸಂಧಾನ ಮಾಡಲಾಗಿದೆ. ಮೇಗಾ ಲೋಕ ಅದಾಲತದಲ್ಲಿ ಎಂಎಂಡಿಆರ್ ಪ್ರಕರಣ. ವಾಹನ ಅಪಘಾತ ಪ್ರಕರಣ. ಭೂಸ್ವಾಧೀನ ಪ್ರಕರಣ. ಕೌಟುಂಬಿಕ ಕಲಹ ಪ್ರಕರಣ. ಬ್ಯಾಂಕ್ ವಸೂಲಾತಿ ಪ್ರಕರಣಗಳು ಸೇರಿದಂತೆ ಮುಂತಾದ ಹಳೆಯದಾದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವ್ಯಾಜ್ಯಗಳು ಬಗೆ ಹರಿದು ಉತ್ಯರ್ಥಗೊಂಡಿವೆ ಎಂದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ವಿಜಯಕುಮಾರ ಬಾಗಡೆ. ಶ್ರೀಕಾಂತ ಟಿ. ಅಶೋಕ ಆರ್.ಎಚ್. ನಾಗೇಶ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next