Advertisement

40 ಕಿ.ಮೀ. ನಡೆದು ಅಭಿಷೇಕಕ್ಕೆ ಕಪಿಲಾ ನದಿ ನೀರು ತಂದರು!

08:18 PM Feb 18, 2023 | Team Udayavani |

ಚಾಮರಾಜನಗರ: ಪ್ರತಿ ವರ್ಷದಂತೆಯೇ, ಈ ಬಾರಿಯೂ ತಾಲೂಕಿನ ಹೆಗ್ಗೊಠಾರ ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಐದು ಕುಟುಂಬಗಳ ತಲಾ ಒಬ್ಬೊಬ್ಬರು ಸದಸ್ಯರು ಕಪಿಲಾ ನದಿಯಿಂದ ಬರಿಗಾಲಲ್ಲಿ ನಡೆದುಕೊಂಡು, ತಲೆ ಮೇಲೆ ಕೊಡ ಹೊತ್ತು ಅಭಿಷೇಕಕ್ಕೆ ನೀರುತಂದರು.

Advertisement

ಶಿವರಾತ್ರಿ ದಿನ ಬೆಳ್ಳಂಬೆಳಗ್ಗೆಯೇ ಹೊರಟು 40 ಕಿ.ಮೀ. ದೂರದ ಕಪಿಲಾ ನದಿಯಿಂದ ತಾಮ್ರದ ಬಿಂದಿಗೆಯಲ್ಲಿ ನೀರು ತುಂಬಿಸಿಕೊಂಡು ಬರಿಗಾಲಲ್ಲಿ, ಬಿರು ಬಿಸಿಲಿನಲ್ಲಿ 40 ಕಿ.ಮೀ. ನಡೆದು ಆ ನೀರನ್ನು ತಂದು ಗ್ರಾಮದ ಸಿದ್ದರಾಮೇಶ್ವರಸ್ವಾಮಿಯ ಅಭಿಷೇಕಕ್ಕೆ ನೀಡುವ ಆಚರಣೆ ಹಿಂದಿನಿಂದಲೂ ನಡೆದುಬಂದಿದೆ.

ಅಂತೆಯೇ ಈ ಬಾರಿಯೂ ಕುಮಾರಸ್ವಾಮಿ, ಶಿವಮಲ್ಲು, ರಾಜು, ಕುಮಾರ, ಕರಿಯಪ್ಪ ಅವರು ಬೆಳಗ್ಗೆಯೇ ಕಪಿಲಾ ನದಿಗೆ ತೆರಳಿ, ಅಲ್ಲಿಂದ ಕೊಡದಲ್ಲಿ ನೀರು ಹೊತ್ತು 40 ಕಿ.ಮೀ. ದೂರ ತಮ್ಮ ಗ್ರಾಮಕ್ಕೆ ನಡೆದುಕೊಂಡು ಬಂದು ಸಂಜೆ 4.30ರಲ್ಲಿ ಗ್ರಾಮಕ್ಕೆ ತಲುಪಿದರು. ಕೊಡಗಳನ್ನು ದೇವಾಲಯದಲ್ಲಿರಿಸಿದರು. ರಾತ್ರಿ ನಡೆಯುವ ಶಿವಲಿಂಗ ಪೂಜೆಗೆ ಈ ನೀರನ್ನು ಅಭಿಷೇಕ ಮಾಡಿ, ಭಕ್ತರಿಗೆ ತೀರ್ಥವನ್ನಾಗಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next