Advertisement

40% Commission: ವಿಚಾರಣಾ ಸಮಿತಿಗೆ ವಿಷಯ ತಜ್ಞರ ನೇಮಕ

08:28 PM Nov 06, 2023 | Team Udayavani |

ಬೆಂಗಳೂರು: ಕೋವಿಡ್‌ ವೇಳೆ ನಡೆದಿದೆ ಎನ್ನಲಾಗಿರುವ ಹಗರಣ, ಹಿಂದಿನ ಸರ್ಕಾರದ ಶೇ.40ರ ಭ್ರಷ್ಟಾಚಾರ ಆರೋಪ ಪ್ರಕರಣಗಳ ತನಿಖೆಗಾಗಿ ನ್ಯಾ.ನಾಗಮೋಹನ್‌ದಾಸ್‌ ನೇತೃತ್ವದಲ್ಲಿ ರಚಿಸಿರುವ ವಿಚಾರಣಾ ಆಯೋಗಕ್ಕೆ ಇಬ್ಬರು ವಿಷಯ ತಜ್ಞರನ್ನು ನೇಮಿಸಲಾಗಿದೆ.

Advertisement

ಲೋಕೋಪಯೋಗಿ ಸೇರಿ ವಿವಿಧ ಇಲಾಖೆಗಳಲ್ಲಿ ನಡೆದಿರುವ ಕಾಮಗಾರಿ ಸಂಬಂಧ ಗುತ್ತಿಗೆದಾರರ ಬಳಿ ಲಂಚ ಪಡೆಯಲಾಗಿದೆ ಎನ್ನುವ ಆರೋಪಗಳಿರುವುದರಿಂದ ಕಾಮಗಾರಿಗೆ ಸಂಬಂಧಿಸಿದಂತೆ ತಾಂತ್ರಿಕ ಅಂಶಗಳನ್ನು ಪರಿಶೀಲನೆ ಮಾಡಬೇಕಿದ್ದು, ಅದೇ ರೀತಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕ್ರಮಗಳ ಪರಿಶೀಲನೆಯನ್ನೂ ಮಾಡಬೇಕಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ವಿಷಯ ತಜ್ಞರ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಅದರಂತೆ ಸರ್ಕಾರದ ನಿವೃತ್ತ ಕಾರ್ಯದರ್ಶಿ ಆರ್‌.ಸಿ. ದೇವರಾಜ್‌ ಹಾಗೂ ನಿವೃತ್ತ ಮುಖ್ಯ ಅಭಿಯಂತರ ಓ.ಕೆ.ಸ್ವಾಮಿ ಅವರನ್ನು ತಾತ್ಕಾಲಿಕ ಸೇವೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next