Advertisement

ಹುತಾತ್ಮರ ಕುಟುಂಬಕ್ಕೆ 4 ಪಟ್ಟು ಪರಿಹಾರ ಮೊತ್ತ ಏರಿಕೆ

11:48 PM Oct 05, 2019 | sudhir |

ಹೊಸದಿಲ್ಲಿ: ಹುತಾತ್ಮರ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ಏರಿಕೆ ಮಾಡಲು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಸೇನೆಯ ದೀರ್ಘ‌ಕಾಲದ ಬೇಡಿಕೆ ಈಡೇರಿದಂತಾಗಿದೆ.

Advertisement

ಯುದ್ಧದಲ್ಲಿ ಮಡಿದ ಹುತಾತ್ಮರ ಕುಟುಂಬಕ್ಕೆ ನೀಡಲಾಗುವ ಪರಿಹಾರ ಮೊತ್ತ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಅಂದರೆ, ಈವರೆಗೆ 2 ಲಕ್ಷ ರೂ. ಇದ್ದ ನೆರವಿನ ಮೊತ್ತ ಈಗ 8 ಲಕ್ಷ ರೂ. ಗೆ ಏರಿಕೆ ಮಾಡಲಾಗಿದೆ. ಅಷ್ಟೇ ಅಲ್ಲ, ಕರ್ತವ್ಯದ ವೇಳೆ ಗಾಯಗೊಂಡವರಿಗೂ ಪರಿಹಾರ ಮೊತ್ತ ಏರಿಕೆಗೆ ನಿರ್ಧರಿಸಲಾಗಿದೆ.

ಪರಿಹಾರ ಮೊತ್ತದ ಏರಿಕೆ ಬೇಡಿಕೆ ಕಳೆದ ಹಲವು ದಿನಗಳಿಂದಲೂ ಚಾಲ್ತಿಯಲ್ಲಿತ್ತು. ಇದಕ್ಕೆ ಸಂಬಂಧಿಸಿದಂತೆ ರಚಿಸಿದ ಸಮಿತಿ ಶಿಫಾರಸಿನ ಹಿನ್ನೆಲೆ ಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈವರೆಗೆ, ಯುದ್ಧದ ವೇಳೆ ಅಸುನೀಗಿದರೆ ಅಥವಾ ಶೇ.60ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯಕ್ಕೆ ಒಳಗಾದರೆ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು.

ಕೌಟುಂಬಿಕ ಪಿಂಚಣಿ, ಸೇನಾ ಸಾಮೂಹಿಕ ವಿಮೆಯಡಿ ಸಿಗುವ ಹಣಕಾಸು ನೆರವು, ಸೇನಾ ಕ್ಷೇಮಾಭಿವೃದ್ಧಿ ನಿಧಿ ಮತ್ತು ಇತರೆ ಪರಿಹಾರ ಮೊತ್ತವಲ್ಲದೆ, ಹೆಚ್ಚುವರಿಯಾಗಿ ಈ ನೆರವನ್ನು ನೀಡಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next