Advertisement

ವ್ಯಾನ್‌ ಮಗುಚಿ ಬಿದ್ದು ಮದುವೆ ಪಾರ್ಟಿಯ 4 ಮಂದಿ ದಾರುಣ ಸಾವು

03:12 PM Apr 17, 2017 | udayavani editorial |

ರಾಯಪುರ : ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಲ್ಲಿ ಮದುವೆ ದಿಬ್ಬಣ ಒಯ್ಯುತ್ತಿದ್ದ ವ್ಯಾನೊಂದು ಮಗುಚಿ ಬಿದ್ದ ಪರಿಣಾಮವಾಗಿ ಇಬ್ಬರು ಬಾಲಕರ ಸಹಿತ ನಾಲ್ವರು ಮೃತಪಟ್ಟು ಇತರ ಆರು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ. 

Advertisement

ಸೋಮುಪುರಿ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೇರಾಯಿ ಗ್ರಾಮದಿಂದ ಸುಮಾರು 20 ಮಂದಿ ವ್ಯಾನಿನಲ್ಲಿ ಹೊರಟಿದ್ದರು.ಅಲ್ಲಿಂದ ಮರಳಿ ಬರುವಾಗ ತಿರುವೊಂದರಲ್ಲಿ ವಾಹನದ ಮೇಲೆ ಚಾಲಕನಿಗೆ ನಿಯಂತ್ರಣ ತಪ್ಪಿ ವಾಹನವು ಅಡಿಮೇಲಾಗಿ ಮಗುಚಿ ಬಿದ್ದಿತು. ಇಲ್ಲಿಂದ ಸುಮಾರು 120 ಕಿ.ಮೀ. ದೂರದ ಜಾಗ್ತಾಕಾಪಾ ಎಂಬಲ್ಲಿ ಈ ಅವಘಡ ನಿನ್ನೆ ತಡರಾತ್ರಿ ಸಂಭವಿಸಿತು.

ಮೃತಪಟ್ಟವರನ್ನು ಗೇಂದ್‌ಲಾಲ್‌ ಸಾಹು 23, ಗೋಲು ಯಾದವ್‌ 14, ಮಂಜ್ಲಾ ಸಾಹು 16 ಮತ್ತು ಸುರೇಶ್‌ ಸೋನ್‌ಕರ್‌ ಎಂದು ಗುರುತಿಸಲಾಗಿದೆ. 

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next