Advertisement

ವಿಜಯಪುರದಲ್ಲಿ 4 ದೂರು ದಾಖಲು

11:16 PM Jun 16, 2019 | Team Udayavani |

ವಿಜಯಪುರ: ಬೆಂಗಳೂರಿನ ಐಎಂಎ ಸಂಸ್ಥಾಪಕ ಮಹ್ಮದ್‌ ಮನ್ಸೂರ ಖಾನ್‌ ವಿರುದ್ಧ ಜಿಲ್ಲೆಯಲ್ಲೂ ದೂರು ದಾಖಲಾಗುತ್ತಿದೆ. ನಗರದ ಗಾಂಧಿ ಚೌಕ್‌ ಪೊಲೀಸ್‌ ಠಾಣೆಯಲ್ಲಿ ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, 20 ಲಕ್ಷ ರೂ.ಹೂಡಿಕೆ ಮಾಡಿ ವಂಚನೆಗೊಳಗಾಗಿರುವ 4 ಜನರು ದೂರು ದಾಖಲಿಸಿದ್ದಾರೆ.

Advertisement

2 ಲಕ್ಷ ರೂ.ಹೂಡಿಕೆ ಮಾಡಿರುವ ಬಡಿಕಮಾನ್‌ ಪ್ರದೇಶ ನಿವಾಸಿ ಚಾಲಕ ಮೆಹಬೂಬ್‌ ಮುರ್ತುಜಸಾಬ್‌ ಕುಂಟೋಜಿ, 4 ಲಕ್ಷ ರೂ. ಹೂಡಿಕೆ ಮಾಡಿರುವ ಮುರ್ತುಜಾ ಪತ್ತನಿ ಕೌಸರಬಾನು ನರಗದ ಗಾಂಧಿಚೌಕ್‌ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

2017ರ ಡಿಸೆಂಬರ್‌ 11ರಂದು ಹೂಡಿಕೆ ಮಾಡಿದ್ದ ಹಣಕ್ಕೆ ಪ್ರತಿ ತಿಂಗಳು 4 ಸಾವಿರ ರೂ.ಲಾಭಾಂಶ ನೀಡಿದ್ದು, ಕಳೆದ ಎರಡು ತಿಂಗಳಿಂದ ಲಾಭಾಂಶ ನೀಡದೆ ವಂಚಿಸಿ ಮೋಸ ಮಾಡಲಾಗಿದೆ ಎಂದು ದೂರಿದ್ದಾರೆ.

ನಗರದ ಸೈಯದ್‌ ಮುಕ್ತಾರ ಮೊಹ್ಮದ್‌ ಜಾಗೀರದಾರ ಎಂಬುವರು 8 ಲಕ್ಷ ರೂ.ಹಾಗೂ ಅವರ ಪತ್ನಿ ಸಯೀದಾಸಲ್ಮಾ ಎಂಬುವರು 6 ಲಕ್ಷ ರೂ.ಹಣ ಹೂಡಿಕೆ ಮಾಡಿದ್ದು, ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next