Advertisement

ಕುಡಿದು ಸಚಿವೆ ಸ್ಮೃತಿ ಇರಾನಿಯನ್ನೇ ಬೆಂಬತ್ತಿದ 4 ವಿದ್ಯಾರ್ಥಿಗಳ ಬಂಧನ

10:55 AM Apr 02, 2017 | |

ನವದೆಹಲಿ: ದೇಶದ ರಾಜಧಾನಿ ಮಹಿಳೆಯರಿಗೆ ಅಷ್ಟು ಸುರಕ್ಷಿತವಲ್ಲ ಎಂಬ ದೂರುಗಳು ಆಗಾಗ್ಗೆ ಕೇಳಿಬರುತ್ತಲೇ ಇವೆ. ಅದಕ್ಕೆ ತಕ್ಕಂತೆ ಇದೀಗ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನೇ ನಾಲ್ವರು ವಿದ್ಯಾರ್ಥಿಗಳು ಕಾರೊಂದರಲ್ಲಿ ಹಿಂಬಾಲಿಸಿದ್ದ ಘಟನೆ ಸುದ್ದಿಯಾಗಿದೆ.

Advertisement

ಶನಿವಾರ ಸಂಜೆ  ನಾನು ಪ್ರಯಾಣಿಸುತ್ತಿರುವ ವೇಳೆ ಕಾರಿನಲ್ಲಿ ನಾಲ್ವರು ಯುವಕರು ನನ್ನನ್ನೇ ಹಿಂಬಾಲಿಸುತ್ತಿರುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದರು. 

ಈ ಬಗ್ಗೆ  ದೆಹಲಿ ಚಾಣಕ್ಯಪುರಿ ಪೊಲೀಸರು ಕಾರ್ಯಪ್ರವೃತ್ತರಾಗಿ ಕಾರಿನಲ್ಲಿರುವ ನಾಲ್ವರು  ವಿದ್ಯಾರ್ಥಿಗಳಶನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅವರನ್ನು ಪರೀಕ್ಷಿಸಲಾಗಿದ್ದು, ಮದ್ಯ ಸೇವಿಸಿರುವುದು ಪತ್ತೆಯಾಗಿದೆ.

 ವಿಚಾರಣೆ ವೇಳೆ ಬರ್ತ್‌ಡೇ ಪಾರ್ಟಿ ಮುಗಿಸಿದ ಬಳಿಕ ತಾವು ಕಾರಿನಲ್ಲಿ ಅಡ್ಡಾಡುತ್ತಿದ್ದುದಾಗಿ  ದೆಹಲಿ ವಿವಿಯ ವಿದ್ಯಾರ್ಥಿಗಳು ಹೇಳಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕ್ಕೆ ಚಿಂತಿಸಲಾಗುತ್ತಿದೆ. ನಾಲ್ವರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next