Advertisement

ಮೂರನೇ ಸರ್ಜಿಕಲ್‌ ಸ್ಟ್ರೈಕ್‌ ಆಗುತ್ತಾ?; ಗೃಹ ಸಚಿವರು ಹೇಳಿದ್ದೇನು?

01:37 PM Mar 09, 2019 | |

ಮಂಗಳೂರು: ಮೂರನೇ ಸರ್ಜಿಕಲ್‌ ಸ್ಟ್ರೈಕ್‌ ನಡೆದಿದೆಯೆ? ನಡೆಯುತ್ತದೆಯೋ? ಹೌದು ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿದ್ದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಶನಿವಾರ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾಡಿದ ಭಾಷಣ. 

Advertisement

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಜನಾಥ್‌ ಸಿಂಗ್‌ ಉರಿ, ಬಾಲಕೋಟ್‌ ಸೇರಿದಂತೆ ಮೂರು ಬಾರಿ ಗಡಿ ದಾಟಿ ಸರ್ಜಿಕಲ್‌ ಸ್ಟ್ರೈಕ್‌ ಮಾಡಲಾಗಿದೆ. ಉರಿ, ಬಾಲಕೋಟ್‌ ಬಗ್ಗೆ ನಿಮಗೆಲ್ಲಾ ಗೊತ್ತಿದೆ ಆದರೆ ಮೂರನೇ ಸ್ಟ್ರೈಕ್‌ ಬಗ್ಗೆ  ನಾನು ಹೇಳಲಾರೆ ಎಂದು ತೀವ್ರ ಕುತೂಹಲ ಮೂಡಿಸಿದ್ದಾರೆ. 

ಭಾರತ ಸಧೃಡ ರಾಷ್ಟ್ರವಾಗಿದ್ದು ವಿರೋಧಿಗಳಿಗೆ ತಕ್ಕ ತಿರುಗೇಟು ನೀಡುತ್ತದೆ. ನಾವು ಯಾರ ತಂಟೆಗೂ ಹೋಗಲ್ಲ. ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದರು. 

ಪಾಕಿಸ್ಥಾನದಲ್ಲಿ ಉಗ್ರರು ಸತ್ತರೆ ಇಲ್ಲಿ ಕೆಲವರಿಗೆ ನೋವಾಗುತ್ತದೆ ಎಂದು ವಿಪಕ್ಷಗಳ ವಿರುದ್ಧ ಕಿಡಿ ಕಾರಿದರು. 

ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುದ್ಧವೂ ತೀವ್ರ ಕಿಡಿ ಕಾರಿದ ರಾಜನಾಥ್‌ ಸಿಂಗ್‌ ಅವರು ರಾಜ್ಯದಲ್ಲಿ ಕಿಚಡಿ ಸರ್ಕಾರವಿದೆ. ರೈತರ ಸಾಲ ಮನ್ನಾ ಇನ್ನೂ ಮಾಡಿಲ್ಲ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next