Advertisement

ಅಮೃತಸರ ರೈಲು ಅವಘಡ: 39 ಮಂದಿಯ ಗುರುತು ಪತ್ತೆ

11:52 AM Oct 20, 2018 | Team Udayavani |

ಅಮೃತಸರ : ಅಮೃತಸರ ರೈಲು ಅವಘಡದಲ್ಲಿ ಮೃತಪಟ್ಟ 61 ಮಂದಿಯ ಪೈಕಿ 39 ಮಂದಿಯ ಗುರುತನ್ನು ಈ ವರೆಗೆ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಇಂದು ಶನಿವಾರ ತಿಳಿಸಿದ್ದಾರೆ. 

Advertisement

ಅವಘಡದಲ್ಲಿ ಗಾಯಗೊಂಡವರನ್ನು ಒಟ್ಟು ಏಳು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಧಿಕಾರಿಗಳ ಪ್ರಕಾರ ಈ ತನಕ 29 ಶವಗಳ ಮರಣೋತ್ತರ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. 

ನಿನ್ನೆ ಶುಕ್ರವಾರ ಸಂಜೆ ರಾವಣ ದಹನವನ್ನು ರೈಲು ಹಳಿಯ ಮೇಲೆ ನಿಂತು ವೀಕ್ಷಿಸುತ್ತಿದ್ದವರ ರೈಲು ಹರಿದು 61 ಮಂದಿ ದಾರಣವಾಗಿ ಮೃತಪಟ್ಟು ಇತರ 72 ಮಂದಿ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ 9 ಮಂದಿ ಸ್ಥಿತಿ ಚಿಂತಾಜನಕವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಅಮೃತಸರ ಸಮೀಪದ ಜೋದಾ ಫಾಟಕ್‌ ಎಂಬಲ್ಲಿ ಈ ದುರ್ಘ‌ಟನೆ ಸಂಭವಿಸಿತ್ತು. ರೈಲು ಜಾಲಂಧರ್‌ನಿಂದ ಬರುತ್ತಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next