Advertisement

ಲೋಕ ಅದಾಲತ್‌ನಲ್ಲಿ 3577 ಪ್ರಕರಣ ಇತ್ಯರ್ಥ

03:36 PM Dec 15, 2019 | Team Udayavani |

ಚಿತ್ರದುರ್ಗ: ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 3577 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

Advertisement

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ವೈ. ವಟವಟಿ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ 28,982 ಪ್ರಕರಣಗಳ ಪೈಕಿ 4935 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಯಿತು. ಇದರಲ್ಲಿ 3577 ಪ್ರಕರಣಗಳು ಇತ್ಯರ್ಥಗೊಂಡಿವೆ.

ಎನ್‌ಐ ಆ್ಯಕ್ಟ್, ಮೋಟಾರು ವಾಹನ, ಎಲೆಕ್ಟ್ರಿಸಿಟಿ ಪ್ರಕರಣಗಳು ಹಾಗೂ ಅಮಲ್‌ ಜಾರಿ ಪ್ರಕರಣಗಳು ಹೆಚ್ಚು ಇತ್ಯರ್ಥವಾಗಿವೆ. ರಾಜಿಯಾದ ಪ್ರಕರಣಗಳ ಒಟ್ಟು ಮೊತ್ತ 8,37,60,466 ರೂ. ಆಗಿದೆ. 865 ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ 112 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ಲೋಕ್‌ ಅದಾಲತ್‌ನಲ್ಲಿ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬನ್ನಿಕಟ್ಟಿ ಹನುಮಂತಪ್ಪ, ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಟಿ. ಶಿವಣ್ಣ ಸೇರಿದಂತೆ ವಿವಿಧ ನ್ಯಾಯಾಲಯಗಳ ನ್ಯಾಯಾ ಧೀಶರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next