Advertisement

ಹದಿನೇಳು ದಿನದಲ್ಲಿ 34 ಲಕ್ಷ ರೂ. ಭಿಕ್ಷಾಟನೆ!

12:31 AM Jun 11, 2019 | Team Udayavani |

ದುಬಾೖ: ಕೇವಲ 17 ದಿನದಲ್ಲಿ ದುಬಾೖನಲ್ಲಿ ಮಹಿಳೆಯೊಬ್ಬಳು ಅನುಕಂಪಗಿಟ್ಟಿಸುವ ಮೂಲಕ 34 ಲಕ್ಷ ರೂ. ಗಳಿಸಿದ್ದಾಳೆ. ಪತಿ ನನ್ನನ್ನು ತೊರೆದಿದ್ದು, ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ನನಗೆ ಹಣಕಾಸಿನ ನೆರವು ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಬೇಡಿಕೊಂಡಿದ್ದಳು. ಇದನ್ನು ಕಂಡು ಕರುಣಾಮಯಿಗಳು ಆಕೆಯ ಬ್ಯಾಂಕ್‌ ಖಾತೆಗೆ ಹಣ ಹಾಕಿದ್ದಾರೆ. ಆದರೆ ಈ ವಿಚಾರ ತಿಳಿದ ಆಕೆಯ ಪತಿ, ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದಿದ್ದಾನೆ. ಹೀಗಾಗಿ ಈಕೆಯ ವಿರುದ್ಧ ದುಬಾೖ ಪೊಲೀಸರು ದೂರು ದಾಖಲಿಸಿ ಕೊಂಡಿದ್ದಾರೆ. ದುಬಾೖನಲ್ಲಿ ಆನ್‌ಲೈನ್‌ ಹಾಗೂ ಇತರ ವಿಧಾನಗಳ ಮೂಲಕ ಭಿಕ್ಷೆ ಬೇಡುವುದು ಅಪರಾಧ ವಾಗಿದ್ದು, ಯಾವುದೇ ಕಾರಣಕ್ಕೂ ಅನುಕಂಪದ ಆಧಾರದಲ್ಲಿ ಹಣ ನೀಡಬಾರದು ಎಂದು ಪೊಲೀಸರು ಜನಸಾಮಾನ್ಯರಿಗೆ ವಿನಂತಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next