Advertisement

32 ಕೆ.ಜಿ. ಚಿನ್ನಾಭರಣ ಕಳವು

12:01 PM Aug 21, 2018 | Team Udayavani |

ಬೆಂಗಳೂರು: ಬಿಬಿಎಂಪಿ ಇಂಜಿನಿಯರ್‌ ದೇವರಾಜ್‌ ಅವರ ಮನೆಗೆ ನುಗ್ಗಿದ ಕಳ್ಳರು 32.55 ಕೆ.ಜಿ. ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿರುವ ಘಟನೆ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ನಡೆದಿದೆ. ಇಂಜಿನಿಯರ್‌ ದೇವರಾಜ್‌ ಆ.17ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಮೈಸೂರಿಗೆ ಹೋಗಿದ್ದರು.

Advertisement

ಇವರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವಿಜಯ್‌ ಮನೆ ಬಳಿಯ ರೂಂನಲ್ಲಿ ವಾಸಿಸುತ್ತಿದರು. ಆ.19ರಂದು ದೇವರಾಜ್‌ ಅವರ ಮನೆ ಬಳಿ ಹೋದ ವಿಜಯ್‌ಗೆ ಮನೆ ಬಾಗಿಲು ಮುರಿದಿರುವುದು ಕಂಡಿದೆ. ಕೂಡಲೇ ದೇವರಾಜ್‌ ಪತ್ನಿ ಪ್ರೀತಿ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಆತಂಕಗೊಂಡ ದೇವರಾಜ್‌ ದಂಪತಿ ಕೂಡಲೇ ಮೈಸೂರಿನಿಂದ ಬೆಂಗಳೂರಿಗೆ ಬಂದು ಮನೆಯೊಳಗೆ ಹೋಗಿ ಪರಿಶೀಲಿಸಿದಾಗ ಮನೆಯೊಳಗಿದ್ದ ವಿವಿಧ ವಿನ್ಯಾಸದ ಚಿನ್ನಾಭರಣ, ವಜ್ರದ ಆಭರಣ, ಬೆಳ್ಳಿಯ ವಸ್ತುಗಳು ಸೇರಿ ಒಟ್ಟು 32.55 ಕೆ.ಜಿ ಚಿನ್ನಾಭರಣ ಹಾಗೂ 60 ಸಾವಿರ ರೂ. ನಗದು ಕಳವು ಮಾಡಿದ್ದಾರೆ.

ಅಲ್ಲದೆ, ಮನೆಯ ಹೊರಗಡೆ ಮತ್ತು ಒಳಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಡಿವಿಆರ್‌ ಪ್ಲೇಯರ್‌ಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ದೇವರಾಜ್‌ ಪತ್ನಿ ಪ್ರೀತಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next