Advertisement

ಶಿಂಧೆ ಬಣ ಮತ್ತು ಠಾಕ್ರೆ ಬಣದ ನಡುವೆ ಘರ್ಷಣೆ; ಐವರ ಬಂಧನ

03:47 PM Sep 11, 2022 | Team Udayavani |

ಮುಂಬಯಿ: ಶಿವಸೇನೆ ಶಾಸಕ ಸದಾ ಸರ್ವಂಕರ್ ಅವರ ಮಗ ಮತ್ತು ಇತರ 6 ಜನರ ಮೇಲೆ ಪೊಲೀಸ್ ಠಾಣೆಯ ಹೊರಗೆ ಗುಂಡು ಹಾರಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

Advertisement

ಪೊಲೀಸ್ ಠಾಣೆಯ ಹೊರಗೆ ಶಾಸಕ ಗುಂಡು ಹಾರಿಸಿದ ನಂತರ ಮುಂಬೈ ಶಾಸಕ ಸರ್ವಾಂಕರ್ ಮತ್ತು ಅವರ ಮಗ ಮತ್ತು ಇತರ 6 ಜನರ ಮೇಲೆ ಪೊಲೀಸರು ಗಲಭೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ದಾದರ್ ನಲ್ಲಿ ಏಕನಾಥ್ ಶಿಂಧೆ ಬಣ ಮತ್ತು ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರ ನಡುವೆ ಘರ್ಷಣೆಯ ನಂತರ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ 5 ಕಾರ್ಯಕರ್ತರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಾಗಿ ಘರ್ಷಣೆ ನಡೆದ ನಂತರ ಪೊಲೀಸರು ಉದ್ಧವ್ ಠಾಕ್ರೆ ಬಣದ 5 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಎಎನ್‌ಐ ವರದಿ ಮಾಡಿರುವಂತೆ ಮುಂಬೈ ಪೊಲೀಸರು 30 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next