Advertisement

ಚಾಲಕನ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಚೆಕ್‌ ವಿತರಣೆ

07:07 PM Apr 17, 2021 | Team Udayavani |

ಹುಬ್ಬಳ್ಳಿ: ಕರ್ತವ್ಯದ ವೇಳೆ ಕಿಡಿಗೇಡಿಗಳು ಬೀಸಿದ ಕಲ್ಲು ತಗುಲಿ ಮೃತಪಟ್ಟ ಸಾರಿಗೆ ಸಂಸ್ಥೆ ಚಾಲಕ ನಬೀದ್‌ ರಸೂಲ್‌ ಕೆ. ಅವಟಿ ಅವರ ಕುಟುಂಬದ ಸದಸ್ಯರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಅವರು 30 ಲಕ್ಷ ರೂ. ಪರಿಹಾರದ ಚೆಕ್‌ ವಿತರಿಸಿದರು.

Advertisement

ಬಾಗಲಕೋಟೆ ವಿಭಾಗದ ಜಮಖಂಡಿ ಘಟಕದ ಚಾಲಕ ನಬೀದ್‌ ರಸೂಲ್‌ ಕೆ. ಅವಟಿ ಕರ್ತವ್ಯದಲ್ಲಿದ್ದಾಗ ಕಿಡಿಗೇಡಿಗಳು ಬಸ್ಸಿನ ಮುಂಭಾಗದ ಗಾಜಿಗೆ ಕಲ್ಲು ಬೀಸಿದ್ದರು. ಕಲ್ಲು ಗಾಜು ಪುಡಿ ಮಾಡಿಕೊಂಡು ಚಾಲಕ ಕುತ್ತಿಗೆ ಭಾಗಕ್ಕೆ ತಗುಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದರು.

ಕೂಡಲೇ ಘಟನೆಗೆ ಸ್ಪಂದಿಸಿದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಅವರು ಜಮಖಂಡಿಗೆ ತೆರಳಿಗೆ ಮೃತರ ಕುಟುಂಬದ ಸದಸ್ಯರಿಗೆ 30 ಲಕ್ಷ ರೂ. ಪರಿಹಾರದ ಚೆಕ್‌ ನೀಡಿದರು. ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡುವ ಭರಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next