Advertisement

ರಾಹುಲ್ ಮನೆಯಲ್ಲಿ 3 ಜನ ಪ್ರಧಾನಿಗಳಾದರೂ ಬಡತನ ನಿರ್ಮೂಲನೆ ಮಾಡಿಲ್ಲ: ಬಿಎಸ್ ವೈ

04:25 PM Sep 10, 2022 | Team Udayavani |

ದೊಡ್ಡಬಳ್ಳಾಪುರ: ”ರಾಹುಲ್ ಗಾಂಧಿ ಬಡವರ ಬಗ್ಗೆ ಮಾತನಾಡುತ್ತಿದ್ದಾರೆ, ಅವರ ಮನೆಯಲ್ಲಿ 3 ಜನ ಪ್ರಧಾನ ಮಂತ್ರಿ ಆಗಿದ್ದರು ಆದರೆ ಅವರು ಬಡತನ ನಿರ್ಮೂಲನೆ ಮಾಡಿಲ್ಲ” ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಗುಡುಗಿದ್ದಾರೆ.

Advertisement

”ಚಿಕ್ಕಬಳ್ಳಾಪುರ, ಭಾಗದಲ್ಲಿ ಸುಧಾಕರ್ ಅವರ ಪರಿಶ್ರಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಆಯ್ಕೆ ಯಾದರೆ 150 ಸ್ಥಾನ ಗೆದ್ದು ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ರೈತರು, ನೇಕಾರರು ನಮ್ಮ ಪಕ್ಷದ ಎರಡು ಕಣ್ಣುಗಳು, ನಾನು ಸಿಎಂ ಆಗಿದ್ದಾಗ ನೇಕಾರರು, ರೈತರ ಸಾಲ ಮನ್ನಾ ಮಾಡಿದ್ದೇನೆ. ರೈತರಿಗೆ ಕೇಂದ್ರದ 6000 ರೂ ಜೊತೆಗೆ ನಾನು 4000 ರೂ. ಕೊಟ್ಟಿದ್ದೇನೆ” ಎಂದರು.

‘ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಬೋಟ್ ನಲ್ಲಿ ತಿರುಗಾಡುವ ಪರಿಸ್ಥಿತಿ ಬಂತು ಎಂದು ಹೇಳಿದ್ದಾರೆ. ಅಂದರೆ ಬೆಂಗಳೂರಲ್ಲಿ ಮಳೆ ಪ್ರಮಾಣ ಎಷ್ಟಾಗಿದೆ ಎನ್ನುವುದು ನಿಮಗೆ ಅರಿವಿದೆಯಲ್ಲವೆ. ನಿಮ್ಮ ಆರೋಪಕ್ಕೆ ಅಧಿವೇಶನದಲ್ಲಿ ಉತ್ತರ ಕೊಡುತ್ತೇವೆ. ಸಿದ್ದರಾಮಯ್ಯ ನಾನೇ ಸಿಎಂ ಎಂಬ ಭ್ರಮೆಯಲ್ಲಿದ್ದಾರೆ” ಎಂದರು.

”ಮೋದಿ ಪ್ರಧಾನಿಯಾಗಿರುವರೆಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ.ಸುಧಾಕರ್ ಅವರ ಪರಿಶ್ರಮದಿಂದ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದು ನೋಡಿದರೆ ನಮ್ಮದೆ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದ ಇನ್ನೂ ಐದಾರು ಕಡೆಗಳಲ್ಲಿ ಜನ ಸ್ಪಂದನ ಕಾರ್ಯಕ್ರಮ ಮಾಡಿದಾಗ ರಾಜ್ಯದಲ್ಲಿ ನಮ್ಮ ಶಕ್ತಿ ಏನು ಎಂದು ತಿಳಿಯಲಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next