Advertisement

3 ತಿಂಗಳ ಪ್ರವಾಸದ ವಿವರ ಕೊಡಿ: ಸಚಿವರಿಗೆ ಪಿಎಂ ಆದೇಶ

03:45 AM Feb 13, 2017 | Team Udayavani |

ನವದೆಹಲಿ: ಅಪನಗದೀಕರಣ ಬಳಿಕದ 3 ತಿಂಗಳಲ್ಲಿ ಕೈಗೊಂಡ ಪ್ರವಾಸದ ವಿವರಗಳನ್ನು ಸೋಮವಾರದ ಒಳಗಾಗಿ ಕೊಡಿ. ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಚಿವರಿಗೆ ಸೂಚಿಸಿದ್ದಾರೆ. ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಈ ಆದೇಶ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

Advertisement

ಸಚಿವರು ತಮ್ಮ ಸ್ವಕ್ಷೇತ್ರಗಳ ಹೊರತಾಗಿ, ಇತರ ಪ್ರದೇಶಗಳಲ್ಲಿ ಅಪನಗದೀಕರಣ ಸಂಬಂಧಿಸಿದಂತೆ ಜನರಿಗೆ ಶಿಕ್ಷಣ ಮತ್ತು ಇತರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆಯೇ ಎನ್ನುವುದನ್ನು ತಿಳಿಯಲು ಪ್ರಧಾನಿ ಬಯಸಿದ್ದಾರೆ ಎಂದು ಹೇಳಲಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮಾಹಿತಿ ಪಡೆದುಕೊಳ್ಳಲು ಸಮನ್ವಯಕಾರರನ್ನಾಗಿ ನೇಮಿಸಲಾಗಿದೆ. ಒಂದು ವೇಳೆ ಪ್ರವಾಸ ಕೈಗೊಳ್ಳದೇ ಇದ್ದರೆ ನವದೆಹಲಿಯಲ್ಲಿಯೇ ಇದ್ದು ಕಚೇರಿಗೆ ಹಾಜರಾಗಿದ್ದರ ಬಗ್ಗೆ ಸಚಿವರು ಪ್ರಮಾಣೀಕರಿಸಬೇಕು. ಸಚಿವರು ಕಚೇರಿ ಕೆಲಸ ಮತ್ತು ಕ್ಷೇತ್ರ ಕರ್ತವ್ಯಗಳನ್ನು ಸಮರ್ಪಕವಾಗಿ ಸರಿದೂಗಿಸಿ ಕೊಂಡು ಹೋಗುತ್ತಿದ್ದಾರೆಯೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next