Advertisement

3 ಜೀವಕ್ಕೆ ಎರವಾದ ಭವಿಷ್ಯ!

12:25 AM Jan 28, 2019 | Team Udayavani |

ಚಿಕ್ಕಬಳ್ಳಾಪುರ: ನಿಮ್ಮ ಮಕ್ಕಳ ಭವಿಷ್ಯ ಚೆನ್ನಾಗಿಲ್ಲ ಎಂಬ ಜೋತಿಷಿಯ ಮಾತು ಕೇಳಿದತಾಯಿ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಿಕ ಘಟನೆ ಚಿಕ್ಕಬಳ್ಳಾಪುರದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

Advertisement

ಸರ್‌ಎಂವಿ ಲೇಔಟ್‌ನ ವಿ.ಆರ್‌.ಉಷಾ (32), ಮಕ್ಕಳಾದ ಶಾನ್ವಿತಾ (2.5), ಶಾಮಂತ್‌ (10) ಮೃತರು. ಶಾಮಂತ್‌ 3ನೇ ತರಗತಿ ಓದುತ್ತಿದ್ದ. ಉಷಾ ತನ್ನ ಇಬ್ಬರು ಮಕ್ಕಳಾದ ಶಾನ್ವಿತಾ ಮತ್ತು ಶಾಮಂತ್‌ ಭವಿಷ್ಯದ ಬಗ್ಗೆ ಹಲವು ದಿನಗಳ ಹಿಂದೆ ಜೋತಿಷಿಯೊಬ್ಬರ ಬಳಿ ಭವಿಷ್ಯ ಕೇಳಿದ್ದು, ಈ ವೇಳೆ ನಿಮ್ಮ ಮಕ್ಕಳ ಭವಿಷ್ಯ ಸರಿಯಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಉಷಾ ತನ್ನ ಗಂಡ ಅಶೋಕ ಮತ್ತು ಅಕ್ಕ, ತಂಗಿ ಜತೆ ಸಾಕಷ್ಟು ಬಾರಿ ಚರ್ಚೆ ಮಾಡಿದ್ದರು. ಗಂಡ ಕೂಡ ಜೋತಿಷಿಗಳ ಮಾತೆಲ್ಲ ನಂಬಬೇಡ ಎಂದು ಧೈರ್ಯ ಹೇಳಿದ್ದರು.
ಶನಿವಾರ ಪತಿ ತನ್ನ ಸ್ವಗ್ರಾಮ ಅಬ್ಲೂಡುಗೆ ತೋಟದಲ್ಲಿ ಪಂಪ್‌ ಮೋಟಾರ್‌ ದುರಸ್ತಿಗೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಉಷಾ ತಡರಾತ್ರಿ 2 ಗಂಟೆ ವೇಳೆಗೆ ಇಬ್ಬರು ಮಕ್ಕಳಿಗೂ ನಿದ್ರೆ ಮಾತ್ರೆ ಕೊಟ್ಟ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿ ನೇಣು ಬಿಗಿದುಕೊಂಡಿದ್ದಾರೆ.

ಅಶೋಕ್‌ ಸರಕಾರಿ ಪ್ರೌಢ ಶಾಲೆ ಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 12 ವರ್ಷಗಳ ಉಷಾ ಅವರ ಜತೆ ಮದುವೆಯಾಗಿತ್ತು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಅಶೋಕ್‌ ಬೆಳಗ್ಗೆ ಮನೆಗೆ ಕರೆ ಮಾಡಿದ್ದು, ಕರೆ ಸ್ಪೀಕರಿಸ ದಿದ್ದಕ್ಕೆ ಆತಂಕಗೊಂಡು ನೆರೆ ಮನೆಯವರಿಗೆ ಕರೆ ಮಾಡಿ ಮನೆಯವರಿಗೆ ಕೊಡುವಂತೆ ತಿಳಿಸಿದ್ದರು. ಪಕ್ಕದ ಮನೆಯವರು ಮನೆ ಬಳಿ ಬಂದು ನೋಡಿದಾಗ ಪ್ರಕರ‌ಣ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next