Advertisement

ರಸ್ತೆ ಬದಿ ನಿಂತಿದ್ದ ಟ್ರಕ್ಕಿಗೆ ಕಾರು ಢಿಕ್ಕಿ : ಮೂವರ ಸಾವು, ಓರ್ವ ಗಂಭೀರ ಗಾಯ

09:22 AM Jun 18, 2019 | Sathish malya |

ಜೈಪುರ : ಜೈಪುರ ಗ್ರಾಮಾಂತರ ಪ್ರದೇವದಲ್ಲಿ ರಸ್ತೆ ಬದಿ ನಿಂತಿದ್ದ ಟ್ರಕ್ಕಿಗೆ ಕಾರು ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ದೌಸಾ – ಮನೋಹರಪುರ ಹೈವೇಯಲ್ಲಿ ಈ ಅವಘಡ ನಡೆದಿದೆ. ದೌಸಾದಿಂದ ಬರುತ್ತಿದ್ದ ಕಾರು ರಸ್ತೆ ಬದಿಯ ಹೊಟೇಲ್‌ ಬಳಿ ನಿಲ್ಲಿಸಿಡಲಾಗಿದ್ದ ಟ್ರಕ್ಕಿಗೆ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದರು.

ಮೃತರನ್ನು ತಾರಾಚಂದ್‌ ಜೈನ್‌ 60, ಅವರ ಸಹೋದರ ರಮೇಶ್‌ಚಂದ್‌ ಜೈನ್‌ 55 ಮತ್ತು ಸುನೀಲ್‌ ಜೈನ್‌ 45 ಎಂದು ಗುರುತಿಸಲಾಗಿದ್ದು ಇವರೆಲ್ಲ ಸಿಕಾರ್‌ ಜಿಲ್ಲೆಯವರು.

ಮರಣೋತ್ತರ ಪರೀಕ್ಷೆಯ ಬಳಿಕ ಮೃತ ದೇಹಗಳನ್ನು ಅವರ ಕುಟುಂಬದವರಿಗೆ  ಬಿಟ್ಟುಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next