Advertisement

ಎಂ.ಕೆ ಸ್ಟಾಲಿನ್ ಮಹತ್ವದ ಕಾನ್ಫರೆನ್ಸ್ ; 3 ಮುಖ್ಯಮಂತ್ರಿಗಳು, ಪ್ರಮುಖ ವಿಪಕ್ಷದ ನಾಯಕರು

10:39 PM Apr 03, 2023 | Team Udayavani |

ಚೆನ್ನೈ: ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಪ್ರತಿಪಕ್ಷದ ಉನ್ನತ ನಾಯಕರು ಸೋಮವಾರ ಡಿಎಂಕೆ ಆಯೋಜಿಸಿದ ಸಾಮಾಜಿಕ ನ್ಯಾಯದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಜಾತಿ ಗಣತಿಗೆ ಬಲವಾಗಿ ಒತ್ತಾಯಿಸಿದರು. ಇದು 2024 ರ ಸಾರ್ವತ್ರಿಕ ಚುನಾವಣೆಯವರೆಗೆ ಬಿಜೆಪಿಯನ್ನು ಎದುರಿಸಲು ಒಗ್ಗಟ್ಟನ್ನು ರೂಪಿಸುವ ಉತ್ಸಾಹಭರಿತ ಮಾರ್ಗವಾಗಿ ಕಂಡಿತು.

Advertisement

“ಸಾಮಾಜಿಕ ನ್ಯಾಯಕ್ಕಾಗಿ ಹೋರಾಟವನ್ನು ಮುಂದಕ್ಕೆ ತೆಗೆದುಕೊಳ್ಳುವುದು ಮತ್ತು ಸಾಮಾಜಿಕ ನ್ಯಾಯ ಚಳುವಳಿಗಾಗಿ ಜಂಟಿ ರಾಷ್ಟ್ರೀಯ ಕಾರ್ಯಕ್ರಮ” ಎಂಬ ವಿಷಯದ ಮೇಲೆತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಕಲ್ಪನೆಯ ಅಖಿಲ ಭಾರತ ಸಾಮಾಜಿಕ ನ್ಯಾಯ ಒಕ್ಕೂಟದ ಹೈಬ್ರಿಡ್-ಮೋಡ್ ಮೊದಲ ಸಮ್ಮೇಳನಕ್ಕೆ ವಿರೋಧ ಪಕ್ಷಗಳು ಒಗ್ಗೂಡಿದವು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಸಭೆಯಲ್ಲಿ ಭಾಗಿಯಾಗಿ ಅಭಿಪ್ರಾಯಗಳನ್ನು ಹಂಚಿಕೊಂಡರು.

2019ರ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಒಂದಾಗಿ ವಾಗ್ದಾಳಿ ನಡೆಸುತ್ತಿರುವುದು ಮಹತ್ವವನ್ನು ಪಡೆದುಕೊಂಡಿದೆ.

ಸಭೆಯಲ್ಲಿ ಜಾತಿ ಗಣತಿಗೆ ಒತ್ತಾಯಿಸಿ ವಿರೋಧ ಪಕ್ಷದ ನಾಯಕರಿಂದ ಒಮ್ಮತ ಕಂಡುಬಂದಿತು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜಾತಿ ಗಣತಿಗೆ ಬಲವಾದ ಪ್ರತಿಪಾದನೆ ಮಾಡಿದರು, ಬಿಹಾರದ ‘ಮಹಾಘಟಬಂಧನ್’ ಸರಕಾರವು ಈಗಾಗಲೇ ಜಾತಿ ಆಧಾರಿತ ಸಮೀಕ್ಷೆಯನ್ನು ಪ್ರಾರಂಭಿಸಿದೆ ಎಂದು ಉಲ್ಲೇಖಿಸಿದರು.ಛತ್ತೀಸ್‌ಗಢ ಮತ್ತು ಜಾರ್ಖಂಡ್ ಸರ್ಕಾರಗಳು ಒಬಿಸಿಗಳಿಗೆ ಹೆಚ್ಚಿನ ಮೀಸಲಾತಿ ನೀಡಲು ಬಯಸಿದಾಗ ರಾಜ್ಯಪಾಲರು ಅದನ್ನು ಸ್ಥಗಿತಗೊಳಿಸಿರುವುದು ಕಳವಳಕಾರಿಯಾಗಿದೆ ಎಂದು ಅವರು ಹೇಳಿದರು.

Advertisement

ಸಾಮಾಜಿಕ ನ್ಯಾಯದ ಆಂದೋಲನದಲ್ಲಿ ಕಾಂಗ್ರೆಸ್ ಇತರ ಪಕ್ಷಗಳ ಜೊತೆಗಿದೆ ಎಂದು ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಪ್ರತಿಪಾದಿಸಿದರು.

ಅಂತಹ ವೇದಿಕೆಗಳು ರಾಜಕೀಯ ಎಂದು ಒಪ್ಪಿಕೊಳ್ಳಲು ಪಕ್ಷಗಳು ಹಿಂಜರಿಯಬಾರದು ಎಂದು ಪ್ರತಿಪಾದಿಸಿದ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್, ಇನ್ನೂ ಕೆಲವು ಪಕ್ಷಗಳು ಬಿಜೆಪಿ ವಿರುದ್ಧ ಹೋರಾಡಲು ಬಯಸುವುದಿಲ್ಲ. ಇದು ಬೂದು ಬಣ್ಣದಲ್ಲಿ ಉಳಿಯುವ ಸಮಯವಲ್ಲ, ಬಿಳಿ ಅಥವಾ ಕಪ್ಪು ಆಗುವ ಸಮಯ ಎಂದು ಪ್ರತಿಪಾದಿಸಿದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಪ್ರಸ್ತುತ ಸರಕಾರವನ್ನು ವಿರೋಧಿಸುವ ಪ್ರಯತ್ನಗಳಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಕೂಡ ಜಾತಿ ಗಣತಿಗೆ ಕರೆ ನೀಡಿದ್ದು, ‘ವರ್ಣ ವ್ಯವಸ್ಥೆ’ ಮುಂದುವರಿಯಬೇಕೆಂದು ತನ್ನ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ಬಯಸಿರುವುದರಿಂದ ಬಿಜೆಪಿ ಅದರಿಂದ ಓಡಿಹೋಗುತ್ತಿದೆ ಎಂದು ಆರೋಪಿಸಿದ್ದಾರೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿಯು ಅವರಿಗೆ ಅವಕಾಶದ ಕಿಟಕಿಗಳನ್ನು ತೆರೆಯುವ ಮಹತ್ವದ ಹೆಜ್ಜೆಯಾಗಿದೆ, ಅದರೊಂದಿಗೆ ಆರ್ಥಿಕ ಅಭಿವೃದ್ಧಿಯೂ ಆಗಬೇಕು ಎಂದರು.

ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸಾಮಾಜಿಕ ನ್ಯಾಯ ದೊರೆಯದ ಹೊರತು ಆರ್ಥಿಕ ಸಮಾನತೆ ಇರುವುದಿಲ್ಲ. ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಮತ್ತು ಗೌರವಯುತವಾಗಿ ಬದುಕುವ ಹಕ್ಕಿದೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ನಾವು ಒಗ್ಗೂಡುವುದು ಅಗತ್ಯವಾಗಿದೆ ಎಂದರು.

ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮಾತನಾಡಿ, ಭಾರತದ ಭವಿಷ್ಯವನ್ನು ರೂಪಿಸಬೇಕಾದರೆ, ಜನರು ತಮ್ಮ ಜಾತಿ, ವರ್ಗ, ಧರ್ಮ ಮತ್ತು ಪಂಥವನ್ನು ಲೆಕ್ಕಿಸದೆ ಜೊತೆಯಲ್ಲಿ ಕರೆದೊಯ್ಯಬೇಕು ಎಂದರು.

ಡಿಎಂಕೆ, ಕಾಂಗ್ರೆಸ್, ಜೆಎಂಎಂ, ಆರ್‌ಜೆಡಿ, ಟಿಎಂಸಿ, ಎಎಪಿ, ಸಿಪಿಐ, ಸಿಪಿಐ(ಎಂ), ಸಮಾಜವಾದಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಎನ್‌ಸಿಪಿ, ಐಯುಎಂಎಲ್, ಭಾರತ್ ರಾಷ್ಟ್ರ ಸಮಿತಿ, ಎಂಡಿಎಂಕೆ, ರಾಷ್ಟ್ರೀಯ ಸಮಾಜ ಪಕ್ಷ, ವಿಸಿಕೆ, ಮನಿತಾನೇಯ ಮಕ್ಕಳ್ ಕಚ್ಚಿ, ಕೊಂಗುನಾಡು ಮಕ್ಕಳ್ ದೇಸಿಯ ಕಚ್ಚಿ ಮತ್ತು ದ್ರಾವಿಡರ್ ಕಳಗಂ, ಲೋಕತಂತ್ರ ಸುರಕ್ಷಾ ಪಕ್ಷಗಳು ಸಮಾವೇಶದಲ್ಲಿ ಪ್ರತಿನಿಧಿಸಿದ್ದವು.

ಸಮಾವೇಶದಲ್ಲಿ ಭಾಗವಹಿಸದ ಮೂರು ಪ್ರಮುಖ ವಿಪಕ್ಷಗಳೆಂದರೆ ಶಿವಸೇನೆ (ಉದ್ಧವ್ ಠಾಕ್ರೆ ಬಣ), ವೈಎಸ್ಆರ್ ಕಾಂಗ್ರೆಸ್ ಪಕ್ಷ ಮತ್ತು ಬಿಜು ಜನತಾ ದಳ.

Advertisement

Udayavani is now on Telegram. Click here to join our channel and stay updated with the latest news.

Next