Advertisement

ಸಾಲಿಗ್ರಾಮ ಜಾತ್ರೆಯಲ್ಲಿ ಭಿಕ್ಷಾಟನೆ ನಿರತ 28 ಮಕ್ಕಳ ರಕ್ಷಣೆ

06:40 PM Jan 16, 2021 | Team Udayavani |

ಕೋಟ: ಸಾಲಿಗ್ರಾಮ ಜಾತ್ರೆಯಲ್ಲಿ ಶನಿವಾರ ಬಲೂನು ವ್ಯಾಪಾರದಲ್ಲಿ ನಿರತರಾದ ಮಕ್ಕಳು ಹಾಗೂ ಬಾಲ ಭಿಕ್ಷುಕರು ಸಹಿತ ಒಟ್ಟು 28ಮಂದಿಯನ್ನು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ನಾಗರಿಕ ಸೇವಾ ಸಮಿತಿ, ಕೋಟ ಪೊಲೀಸ್‌, ಸಾಲಿಗ್ರಾಮ ಪ.ಪಂ. ಜಂಟಿಯಾಗಿ ರಕ್ಷಿಸಿ ಸ್ಥಳಾಂತರಿಸಿದರು.

Advertisement

ರಾಜಸ್ಥಾನದಿಂದ ಜಾತ್ರೆ ವ್ಯಾಪಾರಕ್ಕಾಗಿ ಆಗಮಿಸಿದ ಕುಟುಂಬದೊಂದಿಗೆ ಮಕ್ಕಳು ಸಹ ಬಂದಿದ್ದು ಅವರು ಬಲೂನು ವ್ಯಾಪಾರ ಮತ್ತು ಭಿಕ್ಷಾಟನೆ ಮಾಡುತ್ತ ಸ್ಥಳೀಯರಿಗೆ ತೊಂದರೆ ನೀಡುತ್ತಿದ್ದರು. ಈ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತತ್‌ಕ್ಷಣ ತಂಡದೊಂದಿಗೆ ಸ್ಥಳಕ್ಕಾಗಮಿಸಿ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ಊರಿಗೆ ತೆರಳುವಂತೆ ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವಂತೆ ಹೆತ್ತವರಿಗೆ ಮನವರಿಕೆ ಮಾಡಿಸಿ ರೈಲ್ವೇ ನಿಲ್ದಾಣಕ್ಕೆ ಕಳುಹಿಸಲಾಯಿತು.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್‌, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್‌, ಕೋಟ ಪೊಲೀಸ್‌ ಉಪನಿರೀಕ್ಷಕ ಸಂತೋಷ್‌ ಬಿ. ಪಿ, ಸಹಾಯಕ ಉಪನಿರೀಕ್ಷಕಿ ಮುಕ್ತಾ ಮತ್ತು ಸಿಬಂದಿ, ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ, ಮುಖ್ಯಾಧಿಕಾರಿ ಅರುಣ್‌ ಕುಮಾರ್‌, ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಕಪಿಲ, ಸಾಮಾಜಿಕ ಕಾರ್ಯಕರ್ತರಾದ ಯೋಗೀಶ್‌, ಸುರಕ್ಷಾ, ಸಂದೇಶ್‌, ಜಿಲ್ಲಾ ನಾಗರಿಕ ಸೇವಾ ಸಮಿತಿಯ ನಿತ್ಯಾನಂದ ವಳಕಾಡು, ತಾರಾನಾಥ್‌ ಮೇಸ್ತ ಮತ್ತು ಸ್ಥಳೀಯರಾದ ನಾಗರಾಜ್‌ ಗಾಣಿಗ ಸಾಲಿಗ್ರಾಮ, ದೇಗುಲದ ಸಿಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next