ರಾಷ್ಟ್ರಮಟ್ಟದ ಸಮ್ಮೇಳನಕ್ಕೆ ಮಂಗಳವಾರ ಚಾಲನೆ ದೊರೆಯಿತು.
Advertisement
ನಗರದ ಲಲಿತ ಮಹಲ್ ಹೋಟೆಲ್ ನಲ್ಲಿ ಆಯೋಜಿಸಿರುವ ಎರಡು ದಿನಗಳ ಸಮ್ಮೇಳನಕ್ಕೆ ಮಧ್ಯಪ್ರದೇಶ ರಾಜ್ಯಚುನಾವಣಾ ಆಯುಕ್ತರೂ ಆದ ಸಮ್ಮೇಳನಾಧ್ಯಕ್ಷ ಪರಶುರಾಮ್ ಚಾಲನೆ ನೀಡಿದರು. ಸಮ್ಮೇಳನದಲ್ಲಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ, ಇವಿಎಂ ಹಾಗೂ ಮಲ್ಟಿಚಾಯಿಸ್ ಇವಿಎಂ ಬಳಕೆ, ನಿಗದಿತ ವೇಳೆಗೆ ಚುನಾವಣೆ ನಡೆಸಲು ಎದುರಾಗುವ ಕಾನೂನು ತೊಡಕುಗಳು, ಚುನಾವಣಾ ನೀತಿ ಸಂಹಿತೆಯನ್ನು ಅನುಷ್ಠಾನಗೊಳಿಸುವು ದು ಹಾಗೂ ಕಾನೂನಿನ ಸುಧಾರಣೆ ಮತ್ತು ಹೊಸ ನಿಯಮಗಳ ಕುರಿತಂತೆ ಚರ್ಚೆ ನಡೆಸಲಾ ಯಿತು. ಸಮ್ಮೇಳನದ ಉದ್ಘಾ ಟನಾ ಸಮಾರಂಭದಲ್ಲಿ ಚುನಾವಣಾ ಆಯೋಗದ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ದೊಡ್ಡಮನಿ, ಮಧ್ಯಪ್ರದೇಶ ರಾಜ್ಯ ಚುನಾವಣಾ ಆಯೋಗದ ಉಪ ಕಾರ್ಯದರ್ಶಿ ದೀಪಕ್ ಸಕ್ಸೇನಾ, ಐಎಲ್ ಅಂಡ್ ಎಫ್ ಎಸ್ನ ಉಪಾಧ್ಯಕ್ಷ ಪಂಕಜ್ ಗುಪ್ತಾ ಸೇರಿದಂತೆ 19 ರಾಜ್ಯಗಳ ಚುನಾವಣಾ ಆಯುಕ್ತರು ಉಪಸ್ಥಿತರಿದ್ದರು.