Advertisement

ಬೀಚ್‌ಗಳಲ್ಲಿ ಪ್ರವಾಸಿಗರ ರಕ್ಷಣೆಗೆ 26 ಗೃಹರಕ್ಷಕ ಸಿಬಂದಿ

11:48 PM May 25, 2024 | Team Udayavani |

ಸುರತ್ಕಲ್‌: ಮಳೆಗಾಲದಲ್ಲಿ ಬೀಚ್‌ಗಳಿಗೆ ಬರುವ ಪ್ರವಾಸಿಗರ ರಕ್ಷಣೆಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಬೀಚ್‌ಗಳಲ್ಲಿ ಗೃಹರಕ್ಷಕ ದಳದ 26 ಪರಿಣಿತ ಸಿಬಂದಿಯನ್ನು ನಿಯೋಜಿಸಲಾಗಿದೆ.

Advertisement

ಪ್ರಕ್ಷುಬ್ಧಗೊಳ್ಳುವುದು ಸಾಮಾನ್ಯ. ಆದರೆ ದೂರದ ಪ್ರದೇಶಗಳಿಂದ ಬರುವ ಪ್ರವಾಸಿಗರು ಇದಾವುದನ್ನೂ ಗಮನಿಸಿದೆ ನೇರವಾಗಿ ಸಮುದ್ರದಲ್ಲಿ ಈಜಾಟಕ್ಕಿಳಿಯುತ್ತಾರೆ. ಇದು ಅತ್ಯಂತ ಅಪಾಯಕಾರಿ. ಬೀಚ್‌ಗೆ ಬರುವ ಪ್ರವಾಸಿಗರಿಗೆ ಮಾಹಿತಿ ನೀಡಲು ಹಾಗೂ ಸಮುದ್ರಕ್ಕಿಳಿಯದಂತೆ ಎಚ್ಚರಿಸಲು ಗೃಹರಕ್ಷಕ ಸಿಬಂದಿ ನೇಮಕ್ಕೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲಾ ಗೃಹರಕ್ಷಕ ಇಲಾಖೆ ತಯಾರಿ ನಡೆಸಿದೆ.

ಬೀಚ್‌ನಲ್ಲಿ ನಿಯೋಜನೆ ಗೊಳ್ಳುವವ ಗೃಹರಕ್ಷಕರು ಈಜು ಪರಿಣತಿಯ ಜತೆಗೆ ಪ್ರಥಮ ಚಿಕಿತ್ಸೆಯನ್ನೂ ಬಲ್ಲವರಾಗಿದ್ದಾರೆ.ಪ್ರವಾಸಿಗರಿಗೆ ದೂರದಿಂದಲೇ ಮಾಹಿತಿ ನೀಡಲು ಇವರಿಗೆ ಹ್ಯಾಂಡ್‌ ಮೈಕ್‌ ನೀಡಲಾಗುತ್ತದೆ. ಜತೆಗೆ ಎಚ್ಚರಿಕೆ ಫ‌ಲಕ ಅಳವಡಿಸಲಾಗುತ್ತದೆ. ರಕ್ಷಣೆಗೆ ಟ್ಯೂಬ್‌, ಪ್ರಕ್ಷುಬ್ಧ ಬೀಚ್‌ ಸ್ಥಳದಲ್ಲಿ ಯಾರೂ ಇಳಿಯದಂತೆ ಹಗ್ಗಕಟ್ಟಿ ಕೆಂಪುಪಟ್ಟಿ ಅಳವಡಿಸಲಾಗುತ್ತದೆ.

ಸೋಮೇಶ್ವರ, ಉಳ್ಳಾಲ, ತಣ್ಣೀರು ಬಾವಿ, ಸುರತ್ಕಲ್‌, ಸಸಿಹಿತ್ಲು ಸಹಿತ ಪ್ರಮುಖ 8 ಬೀಚ್‌ ಸ್ಥಳದಲ್ಲಿ ಗೃಹರಕ್ಷಕರು ಕಣ್ಗಾವಲು ನಡೆಸಲಿದ್ದಾರೆ.

ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಎರಡು ಹಂತದಲ್ಲಿ ಸಿಬಂದಿ ಇರಲಿದ್ದಾರೆ.ಕೆಲವು ಕಡೆ ಜೀವ ರಕ್ಷಕದಳವಿದ್ದರೂ ಪ್ರವಾಸಿಗರು ಸೂಚನೆ ಪಾಲಿಸದೆ ಇರುವ ಘಟನೆಯೂ ನಡೆಯುತ್ತದೆ. ಇದನ್ನು ನಿಯಂತ್ರಿಸಲು ಸಮವಸ್ತ್ರ ಸಹಿತ ಗೃಹರಕ್ಷಕರನ್ನು ನಿಯೋಜಿಸಿ ಕಾನೂನು ಪ್ರಕಾರವಾಗಿಯೇ ಎಚ್ಚರಿಸಿ ಮುಂಜಾಗ್ರತೆ ವಹಿಸಲು ಇದು ಸಹಕಾರಿಯಾಗಲಿದೆ.

Advertisement

ಪ್ರಕೃತಿ ವಿಕೋಪ ಸಂದರ್ಭ ರಕ್ಷಣೆಗೆ ಎರಡು ಬೋಟ್‌ಗಳನ್ನು ಸ್ಥಳೀಯವಾಗಿ ಬಳಕೆಗೆ ಮೀಸಲಿಟ್ಟುಕೊಂಡಿದೆ. ಜಿಲ್ಲಾಧಿಕಾರಿಗಳ ಮಾರ್ಗದರ್ಶನ, ಸೂಚನೆಯಂತೆ ಪ್ರಮುಖ ಬೀಚ್‌ಗಳಲ್ಲಿ ಪ್ರವಾಸಿಗರಿಗೆ ಪ್ರಕ್ಷುಬ್ಧ ಸಮುದ್ರದ ಮಾಹಿತಿ ಹಾಗೂ ನೀರಿಗೆ ಇಳಿಯದಂತೆ ಕ್ರಮ ಕೈಗೊಳ್ಳಲು 16 ಮಂದಿ ಪರಿಣಿತ ಗೃಹರಕ್ಷಕ ಸಿಬಂದಿಯನ್ನು ನಿಯೋಜಿಸಲಾಗುವುದು ಎಂದು ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ| ಮುರಳಿ ಮೋಹನ್‌ ಚೂಂತಾರು ತಿಳಿಸಿದ್ದಾರೆ.

ಉಡುಪಿಯಲ್ಲಿ 10 ಸಿಬಂದಿ
ಉಡುಪಿಯ ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷೆಗೆ ವಿಶೇಷ ಗಮನ ಹರಿಸಲಾಗಿದೆ. ಮಲ್ಪೆ, ಸೈಂಟ್‌ ಮೇರಿಸ್‌ ದ್ವೀಪದಲ್ಲಿ ತಲಾ ಇಬ್ಬರು, ಕಾಪು, ಪಡುಬಿದ್ರಿ, ಪಡುಕೆರೆ, ಮರವಂತೆಯಲ್ಲಿ ಜಿಲ್ಲೆಯ ಪ್ರಮುಖ ಬೀಚ್‌ನಲ್ಲಿ ತಲಾ ಇಬ್ಬರಂತೆ ಒಟ್ಟು 10 ಗೃಹರಕ್ಷಕ ಸಿಬಂದಿ ನಿಯೋಜನೆ ಮಾಡಲಾಗಿದೆ. ಮಳೆಗಾಲದ ವಿಶೇಷ ಸುರಕ್ಷೆಗಾಗಿ ಜೂನ್‌ ಮೊದಲ ವಾರದ ಅನಂತರದಲ್ಲಿ ಕರಾವಳಿ ಕಾವಲು ಪಡೆ ಮೂಲಕ ಹೆಚ್ಚುವರಿ ಸಿಬಂದಿ ನಿಯೋಜನೆ ನಡೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಸಿ.ಯು. ಅವರು ಉದಯವಾಣಿಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next