Advertisement

ಮದುವೆ ಹಾಲ್‌ ಗೋಡೆ ಕುಸಿದು 26 ಸಾವು; ಪ್ರಧಾನಿ ಪರಿಹಾರ ಘೋಷಣೆ

12:18 PM May 11, 2017 | Team Udayavani |

ಜೈಪುರ : ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ  ತೀವ್ರವಾಗಿ ಬೀಸಿದ ಸುಂಟರಗಾಳಿಗೆ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಹಾಲ್‌ನಗೋಡೆ ಉರುಳಿ ಬಿದ್ದು ಕನಿಷ್ಠ 26 ಮಂದಿ ಮೃತಪಟ್ಟ ಘಟನೆ ನಿನ್ನೆ ಬುಧವಾರ ತಡರಾತ್ರಿ ಸಂಭವಿಸಿದೆ. 

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬದವರಿಗೆ ತಲಾ 2 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರೆ. 

ಮದುವೆ ಸಮಾರಂಭ ನಡೆಯುತ್ತಿದ್ದ ಹಾಲ್‌ನ ಗೋಡೆ ಮತ್ತು ಅದಕ್ಕೆ ತಾಗಿಕೊಂಡಿದ್ದ ಟಿನ್‌ ಶೆಡ್‌ ಕುಸಿದು ಬಿತ್ತು ಎಂದು ಭರತ್‌ಪುರ ಪೊಲೀಸ್‌ ಸುಪರಿಂಟೆಂಡೆಂಟ್‌ ಅನಿಲ್‌ ತಾಂಕ್‌ ತಿಳಿಸಿದ್ದಾರೆ. 

ಗಾಯಗೊಂಡ 26 ಮಂದಿಯಲ್ಲಿ 15 ಜನರ ಸ್ಥಿತಿ ಗಂಭೀರವಿದೆ ಎಂದವರು ಹೇಳಿದ್ದಾರೆ. 

ಕುಸಿದು ಬಿದ್ದ ಗೋಡೆಯು 90 ಅಡಿ ಉದ್ದ ಹಾಗೂ 12ರಿಂದ 13 ಅಡಿ ಎತ್ತರದ್ದಾಗಿತ್ತು. ಮದುವೆ ಸಮಾರಂಭಕ್ಕಾಗಿ ಈ ಗೋಡೆಯ  ಸನಿಹದಲ್ಲೇ ಫ‌ುಡ್‌ ಸ್ಟಾಲ್‌ಗ‌ಳನ್ನು ಹಾಕಲಾಗಿತ್ತು. 

Advertisement

ಮದುವೆ ಹಾಲ್‌ನ ಮಾಲಕನ ಮೇಲೆ ಕೇಸು ದಾಖಲಿಸಲಾಗಿದೆ ಎಂದಿರುವ ಪೊಲೀಸರು  ಭರತ್‌ಪುರದಲ್ಲಿನ ಎಲ್ಲ ಮದುವೆ ಹಾಲ್‌ಗ‌ಳ ಸ್ಥಿತಿ ಗತಿ ಹಾಗೂ ಸುರಕ್ಷೆಯ ಬಗ್ಗೆ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿದರು. 

ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಮೃತರಿಗಾಗಿ ಶೋಕ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳ ಸೂಕ್ತ ಸಕಾಲಿಕ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next