Advertisement

ರಾಜ್ಯದ ಮನವಿಗೆ 2.5 ಟಿಎಂಸಿ ನೀರು ಹರಿಸಿದ ಮಹಾರಾಷ್ಟ್ರ

02:23 PM Apr 12, 2017 | Team Udayavani |

ವಿಜಯಪುರ: ಕರ್ನಾಟಕದ ಮನವಿ ಮೇರೆಗೆ ಮಹಾರಾಷ್ಟ್ರ ಸರ್ಕಾರ ಕೊಯ್ನಾಗೆ 2.5 ಟಿಎಂಸಿ ನೀರು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ತಲೆದೋರಿರುವ ಕುಡಿಯುವ ನೀರಿನ ಭೀಕರ ಪರಿಸ್ಥಿತಿ ನಿವಾರಣೆಗಾಗಿ ಸಿಎಂ ಸಿದ್ದರಾಮಯ್ಯ ಮಹಾರಾಷ್ಟ್ರ ಸಿಎಂ ಜೊತೆ ಮಾತನಾಡಿದ್ದರು.

Advertisement

ತಮ್ಮ ನೇತೃತ್ವದ ನಿಯೋಗ ಶೀಘ್ರವೇ ಮಹಾರಾ ಷ್ಟ್ರಕ್ಕೆ ತೆರಳಿ ಅಲ್ಲಿನ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಮನವಿ ಮಾಡುವುದಾಗಿ ಜಲಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಹೇಳಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಕೊಯ್ನಾದಿಂದ ಕೃಷ್ಣಾ ನದಿಗೆ 2.5 ಟಿಎಂಸಿ ನೀರು ಹರಿಸಿಕೊಂಡಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ, ಚಿಕ್ಕೋಡಿ, ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಚಿಕ್ಕಪಡಸಲಗಿ ಮುಂತಾದ ಕೃಷ್ಣಾ ನದಿ ಆಧಾರಿತ ನೀರಿನ ಪ್ರದೇಶಗ ಳಲ್ಲಿ ಸಮಸ್ಯೆ ನೀಗಲಿದೆ. ಮಹಾರಾಷ್ಟ್ರದಿಂದ ಈ ಹಿಂದೆ ಹಣ ಕೊಟ್ಟು ನೀರು ಪಡೆಯಲಾಗುತ್ತಿತ್ತು ಎಂದಿದ್ದರು

Advertisement

Udayavani is now on Telegram. Click here to join our channel and stay updated with the latest news.

Next