Advertisement

ಅಣೆಕಟ್ಟು ಒಡೆದು 24 ಜನ ಸಾವು

10:21 AM Jul 05, 2019 | mahesh |

ಚಿಪ್ಳೂಣ್‌: ಕೊಂಕಣ ಭಾಗದಲ್ಲಿ ಅಬ್ಬರಿಸುತ್ತಿರುವ ಮಳೆಯಿಂದಾಗಿ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಚಿಪ್ಳೂಣ್‌ ತಾಲೂಕಿನ ತೇವಾರಿ ಡ್ಯಾಂ (ಅಣೆಕಟ್ಟು) ಒಡೆದು 24 ಜನರು ಕೊಚ್ಚಿಕೊಂಡು ಹೋಗಿದ್ದು, ಏಳು ಗ್ರಾಮಗಳಲ್ಲಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

Advertisement

ಚಿಪ್ಳೂಣ್‌ನಿಂದ 33 ಕಿ.ಮೀ. ದೂರದಲ್ಲಿರುವ ತೇವಾರಿ ಡ್ಯಾಂ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಒಂದು ಬದಿಯಲ್ಲಿ ಒಡೆದು ಹೋಗಿದೆ. ಇದರಿಂದ ಒಮ್ಮಿಂದಲೇ ರಭಸವಾಗಿ ನೀರು ಧುಮುಕಿ ಜಲಾಶಯದ ಕೆಳಭಾಗದಲ್ಲಿರುವ ಏಳು ಗ್ರಾಮಗಳಿಗೆ ನುಗ್ಗಿ ಪ್ರವಾಹ ಉಂಟಾಯಿತು. ನೀರಿನ ರಭಸಕ್ಕೆ 24 ಜನರು ಕೊಚ್ಚಿಕೊಂಡು ಹೋಗಿದ್ದಾರೆ. ಇದಷ್ಟೇ ಅಲ್ಲ, ಡ್ಯಾಂ ಪಕ್ಕದಲ್ಲಿರುವ 13 ಮನೆಗಳೂ ನೀರಿನಲ್ಲಿ ಕೊಚ್ಚಿ ಹೋಗಿವೆ. ತೇವಾರಿ ಜಲಾಶಯದ ಪಕ್ಕದಲ್ಲಿರುವ ವಾಲೋಟಿ, ಧಳವಟನೆ, ಘಾನೆ, ಸತಿ, ಚಿಂಚಗರಿ, ಕ್ರೆಡಿ, ಚಿವುಳಾ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. ಗ್ರಾಮಗಳಿಗೆ ಹೋಗುವ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next