Advertisement

ರಾಜ್ಯದಲ್ಲಿ 233 ಕೋವಿಡ್‌ ಪ್ರಕರಣ ಪತ್ತೆ: 6 ಮಂದಿ ಸಾವು

10:00 PM Mar 04, 2022 | Team Udayavani |

ಬೆಂಗಳೂರು:  ರಾಜ್ಯದಲ್ಲಿ ಶುಕ್ರವಾರ 233 ಹೊಸ ಕೋವಿಡ್‌ ಪ್ರಕರಣ ಪತ್ತೆಯಾಗಿದ್ದು, 648 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣ ಸಂಖ್ಯೆ 3,469ಕ್ಕೆ ಇಳಿಕೆಯಾಗಿದೆ.

Advertisement

ರಾಜ್ಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ 6 ಮಂದಿ ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ.

ಬೆಂಗಳೂರು ನಗರ 2, ಧಾರವಾಡ, ಹಾಸನ, ತುಮಕೂರು, ವಿಜಯಪುರ ಜಿಲ್ಲೆಯಲ್ಲಿ ತಲಾ ಒಂದು ಮರಣ ಪ್ರಕರಣ ದಾಖಲಾಗಿದೆ. ಆ ಮೂಲಕ ಮರಣ ದರ ಶೇ. 2.57 ಹಾಗೂ ಪಾಸಿಟಿವ್‌ ದರ ಶೇ. 0.48ಕ್ಕೆ ಇಳಿಕೆಯಾಗಿದೆ.

6 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ
ಕೊಪ್ಪಳ, ರಾಮನಗರ, ವಿಜಯಪುರ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರ 163, ಮೈಸೂರು 9, ಶಿವಮೊಗ್ಗ , ಉತ್ತರ ಕನ್ನಡ 7, ಕಲಬುರಗಿ, ತುಮಕೂರ, ಉಡುಪಿ 5, ಕೋಲಾರ, ಬೆಳಗಾವಿ 4, ಚಿತ್ರದುರ್ಗ, ಗದಗ 3, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ, ರಾಯಚೂರು, ಧಾರವಾಡ 2, ಬಳ್ಳಾರಿ, ಹಾಸನ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ಮಂಡ್ಯ ಜಿಲ್ಲೆಯಲ್ಲಿ ತಲಾ ಒಂದು ಹೊಸ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next