“ಒತ್ತಡದಲ್ಲಿ ಹೇಗೆ ಈಜುವುದೆಂದು ನಮಗೆ ತರಬೇತಿ ನೀಡಲಾಗುತ್ತದೆ. ಹೀಗಾಗಿ ನನ್ನ ಹೆಚ್ಚಿನ ಗಮನ ಈಜಿನ ಮೇಲಿತ್ತು’ ಎಂದೂ ಸಾಜನ್ ಹೇಳಿದರು.
Advertisement
ಸಾಜನ್ ಅವರ ತಾಯಿ ಶಾಂತಿ ಮೋಳ್ ತಮಿಳುನಾಡಿನವರಾಗಿದ್ದು, ಮಗ ಏಶ್ಯಾಡ್ನಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂಬ ಕಾರಣಕ್ಕೆ ಕೇರಳದ ಪ್ರವಾಹದ ವಿಚಾರವನ್ನು ಗುಟ್ಟು ಮಾಡಿದ್ದರು.
ಜಕಾರ್ತಾಕ್ಕೆ ಆಗಮಿಸುವ ಸಂದರ್ಭದಲ್ಲೇ ಕೇರಳದಲ್ಲಿ ಮಳೆ ದಿನೇ ದಿನೇ ಹೆಚ್ಚಾಗುತ್ತಿತ್ತು. ಆದರೆ ಈ ಮಟ್ಟದಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ, ಅನಾಹುತ ತಂದೊಡ್ಡಲಿದೆ ಎಂದು ತಿಳಿದಿರಲಿಲ್ಲ. ಕುಟುಂಬದವರ ಬಗ್ಗೆ ಯೋಚಿಸಿ, ನಿದ್ದೆ ಸಮಸ್ಯೆ ಕಾಡಿತ್ತು. ನೆಟ್ವರ್ಕ್ ಸಮಸ್ಯೆಯಿಂದಾಗಿ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಆಮೇಲೆ ನನ್ನ ಸಂಬಂಧಿಯೊಬ್ಬರು ಕರೆ ಮಾಡಿ ಎಲ್ಲರು ಸುರಕ್ಷಿತರಾಗಿದ್ದಾರೆ ಮತ್ತು ಎಲ್ಲವೂ ಸುಗಮವಾಗಿದೆ ಎಂದು ತಿಳಿಸಿದ ಬಳಿಕ ಸಮಾಧಾನವಾಗಿದೆ.
ಸಾಜನ್ ಪ್ರಕಾಶ್