Advertisement

4 ವರ್ಷಗಳ ಬಳಿಕ ತಲ್ವಾರ್ ದಂಪತಿ ದಾಸ್ನಾ ಜೈಲಿಂದ ರಿಲೀಸ್

06:07 PM Oct 16, 2017 | Team Udayavani |

ನವದೆಹಲಿ: ಆರುಷಿ ಹಾಗೂ ಮನೆಕೆಲಸದ ಹೇಮರಾಜ್ ಕೊಲೆ ಪ್ರಕರಣದಲ್ಲಿ ಕಳೆದ ವಾರ ಪೋಷಕರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ಅವರನ್ನು ಹೈಕೋರ್ಟ್ ಖುಲಾಸೆಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಗಾಜಿಯಾಬಾದ್ ನ ದಾಸ್ನಾ ಜೈಲಿನಿಂದ ಸೋಮವಾರ ಬಿಡುಗಡೆಗೊಂಡಿದ್ದಾರೆ.

Advertisement

ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಜೈಲುವಾಸದಿಂದ ಹೊರಬಂದ ತಲ್ವಾರ್ ದಂಪತಿಯನ್ನು ರಾಜೇಶ್ ಸಹೋದರ ದಿನೇಶ್ ತಲ್ವಾರ್, ವಕೀಲರಾದ ಮನೋಜ್ ಸಿಸೋಡಿಯಾ ಹಾಗೂ ತನ್ವೀರ್ ಅಹ್ಮದ್ ಮೀರ್ ಅವರು ಸಂತಸದಿಂದ ಬರಮಾಡಿಕೊಂಡರು.

ಜೈಲಿನಿಂದ ತಮ್ಮ ಕಕ್ಷಿದಾರರು ರಿಲೀಸ್ ಆಗಿರುವುದು ತುಂಬಾ ಖುಷಿ ಕೊಟ್ಟಿರುವುದಾಗಿ ಮೀರ್ ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದರು. ಆರುಷಿ ಕೊಲೆ ಪ್ರಕರಣದಲ್ಲಿ ತಲ್ವಾರ್ ದಂಪತಿ ನಿರಪರಾಧಿಗಳು ಎಂಬುದನ್ನು ಅಲಹಾಬಾದ್ ಹೈಕೋರ್ಟ್ ತೀರ್ಪು ಸಾಬೀತುಪಡಿಸಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next