Advertisement

ಮುತ್ತಿನ ಪ್ರಕರಣ: ಗೇರ್ ಕೃತ್ಯಕ್ಕೆ ಶಿಲ್ಪಾ ಶೆಟ್ಟಿ’ಸಂತ್ರಸ್ತೆ’ಎಂದ ಮುಂಬೈ ಕೋರ್ಟ್

05:15 PM Jan 25, 2022 | Team Udayavani |

ಮುಂಬಯಿ : ಸಾರ್ವಜನಿಕ ಸಮಾರಂಭವೊಂದರಲ್ಲಿ ಹಾಲಿವುಡ್ ತಾರೆ ರಿಚರ್ಡ್  ಗೇರ್ ಅವರು ಕೆನ್ನೆಗೆ ಮುತ್ತಿಟ್ಟ ಅಶ್ಲೀಲ ವರ್ತನೆ ಪ್ರಕರಣದಲ್ಲಿ ಸಿಲುಕಿದ ಸುಮಾರು 15 ವರ್ಷಗಳ ನಂತರ, ನಟಿ ಶಿಲ್ಪಾ ಶೆಟ್ಟಿಯವರನ್ನು ಮುಂಬೈ ನ್ಯಾಯಾಲಯವು ಪ್ರಕರಣದಿಂದ ಬಿಡುಗಡೆ ಮಾಡಿದೆ.

Advertisement

ಶಿಲ್ಪಾ ಶೆಟ್ಟಿ ಕೃತ್ಯದಲ್ಲಿ ಸಂತ್ರಸ್ತೆ ಎಂದು ತೋರುತ್ತದೆ ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೇತ್ಕಿ ಚವ್ಹಾಣ್ ಅವರಿದ್ದ ನ್ಯಾಯಾಲಯ ಪೀಠ ಜನವರಿ 18 ರಂದು ಶಿಲ್ಪಾ ಶೆಟ್ಟಿಯವರನ್ನು ಪ್ರಕರಣದಿಂದ ಬಿಡುಗಡೆಗೊಳಿಸಿತ್ತು. ಸೋಮವಾರ ವಿವರವಾದ ಆದೇಶದ ಪ್ರತಿ ಲಭ್ಯವಾಗಿದೆ.

2007 ರಲ್ಲಿ, ರಾಜಸ್ಥಾನದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಗೇರ್  ಅವರು ವೇದಿಕೆಯಲ್ಲೇ ಶಿಲ್ಪಾರನ್ನು ಅಪ್ಪಿ ಕೆನ್ನೆಗೆ ಮುತ್ತಿಟ್ಟಿದ್ದು ದೇಶದಲ್ಲಿ ಸಂಚಲನ ಮೂಡಿಸಿತ್ತು.

ಹಲವರು ದೂರುಗಳನ್ನು ನೀಡಿದ್ದರು. ದೂರುಗಳ ನಂತರ, ಗೆರ್ ಮತ್ತು ಶೆಟ್ಟಿ ಇಬ್ಬರ ವಿರುದ್ಧವೂ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಶ್ಲೀಲತೆಗಾಗಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಶಿಲ್ಪಾ ಶೆಟ್ಟಿ ಆರೋಪಿ ನಂ.1 ಆಗಿ ಮತ್ತು ರಿಚರ್ಡ್ ಗೆರ್  ಅವರ ವಿರುದ್ಧ ದೂರು ದಾಖಲಾಗಿತ್ತು. ಚುಂಬನದ ಘಟನೆಯ ಬಳಿಕ ಭಾರತದ ಹಲವೆಡೆ ತೀವ್ರ ಪ್ರತಿಭಟನೆಗಳನ್ನು ನಡೆಸಲಾಗಿತ್ತು.

Advertisement

2017 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜಸ್ಥಾನದ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯದಿಂದ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಲಾಗಿತ್ತು.

ದೂರಿಗೆ ಲಗತ್ತಿಸಲಾದ ಯಾವುದೇ ಸುದ್ದಿ ವರದಿಗಳು ಸಾಮಾನ್ಯ ಉದ್ದೇಶವನ್ನು ಪ್ರದರ್ಶಿಸಿಲ್ಲ ಎಂದು ಮುಂಬೈ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. ಸಹ ಆರೋಪಿ ಗೆರೆ ಮುತ್ತು ಕೊಟ್ಟಾಗ ಪ್ರತಿಭಟಿಸಲಿಲ್ಲ ಎಂಬುದು ಶೆಟ್ಟಿ ವಿರುದ್ಧದ ಆರೋಪ. “ಇದು ಯಾವುದೇ ಕಲ್ಪನೆಯ ಮೂಲಕ ಅವಳನ್ನು ಯಾವುದೇ ಅಪರಾಧದ ಸಂಚುಗಾರ್ತಿ ಅಥವಾ ಅಪರಾಧಿಯನ್ನಾಗಿ ಮಾಡುವುದಿಲ್ಲ” ಎಂದು ಆದೇಶವು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next