Advertisement

ನೆರೆ ಸಂತ್ರಸ್ತರಿಗೆ 200 ಮನೆ: ಗದಗದಲ್ಲಿ ಸುಧಾಮೂರ್ತಿ ಭರವಸೆ

09:29 AM Aug 31, 2019 | keerthan |

ಗದಗ: ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿ ಉಂಟಾದ ಪ್ರದೇಶಗಳಿಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ|ಸುಧಾ ಮೂರ್ತಿ ಶುಕ್ರವಾರ ಭೇಟಿ ನೀಡಿದರು. ಸಂತ್ರಸ್ತರ ನೋವಿಗೆ ಸ್ಪಂದಿಸುವುದಾಗಿ ಹೇಳಿಕೆ ನೀಡಿದ ಅವರು 200 ಮನೆ ನಿರ್ಮಿಸುವ ಭರವಸೆ ನೀಡಿದರು.

Advertisement

ಗದಗ ಜಿಲ್ಲೆ ಕೊಣ್ಣೂರು ಗ್ರಾಮಕ್ಕೆ ಭೇಟಿ ನೀಡಿದ ಡಾ|ಸುಧಾ ಮೂರ್ತಿ, ಇನ್ಫೋಸಿಸ್ ಪ್ರತಿಷ್ಠಾನದಿಂದ ಈಗಾಗಲೆ ಸುಮಾರು ಐದು ಕೋಟಿ ರೂಪಾಯಿ ಸಾಮಗ್ರಿ ವಿತರಿಸಲಾಗಿದೆ. ಮೊದಲ ಹಂತದಲ್ಲಿ 100 ಮನೆ, ನಂತರ ಎರಡನೇ ಹಂತದಲ್ಲಿ 100 ಮನೆ ನೀಡುವುದಾಗಿ ಹೇಳಿಕೆ ನೀಡಿದರು.

ಸರ್ಕಾರ ಜಾಗ ತೋರಿಸಬೇಕು. ಜೊತೆಗೆ ಅಲ್ಲಿ ಜನ ವಾಸಿಸುವುದಾಗಿ ಭರವಸೆ ನೀಡಿಬೇಕು. ಫಲಾನುಭವಿಗಳಿಗೆ ಜಾಗದ ಹಕ್ಕುಪತ್ರ ನೀಡಿದ್ರೆ ಮಾತ್ರ ಮನೆಗಳ ನಿರ್ಮಾಣ ಮಾಡುವುತ್ತೇವೆ.  ಪ್ರತಿ ಮನೆಗೆ 10 ಲಕ್ಷ ಖರ್ಚುಮಾಡಿ ಮನೆ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next