Advertisement
ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಮೂರು ದಿನಗಳ ಪ್ರವಾಸಿ ಭಾರತೀಯ ದಿವಸ ಸಮಾವೇಶದಲ್ಲಿ ಭಾರತೀಯ ಯುವ ರಾಯಭಾರಿಗಳ ಜತೆ ಸಂವಾದ ನಡೆಸಿದ ಅವರು, ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ನಮ್ಮಲ್ಲಿನ ಸಾಕಷ್ಟು ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುತ್ತಿದ್ದಾರೆ. ದೇಶದಲ್ಲಿಯೇ ಅಂತಹ ಶಿಕ್ಷಣ ಕಲ್ಪಿಸಿದರೆ ವಿದೇಶಗಳಿಗೆ ಹೋಗುವುದನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ 10 ಸರ್ಕಾರಿ ವಿಶ್ವವಿದ್ಯಾಲಯ ಸ್ಥಾಪಿಸಿ, 10 ಖಾಸಗಿ ಶಿಕ್ಷಣ ವಿಶ್ವವಿದ್ಯಾಲಯಗಳಿಗೂ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.
Related Articles
Advertisement
ವಿದೇಶಗಳಲ್ಲಿ ಅತ್ಯುತ್ತಮ ಸಂಶೋಧನಾ ಕೇಂದ್ರಗಳ ಮಾಹಿತಿ ನೀಡಲು ಹಾಗೂ ಸ್ವದೇಶಕ್ಕೆ ಮರಳಿದ ನಂತರ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಲು ಇಚ್ಛಿಸುವವರಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಜಾಗತಿಕ ಸಂಶೋಧನಾ ಸಂವಾದ ಸಂಪರ್ಕ (ಎನ್ಆರ್ಐಎನ್) ಕೇಂದ್ರ ಆರಂಭಿಸಲಾಗಿದೆ. ಇದಲ್ಲದೇ ಉನ್ನತ ಶಿಕ್ಷಣ ಹಣಕಾಸು ಏಜೆನ್ಸಿ ವತಿಯಿಂದ ವಿದ್ಯಾರ್ಥಿಗಳ ಅಗತ್ಯ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿದೇಶದಲ್ಲಿ ಓದುವವರಿಗೆ ಕಾರ್ಡ್:ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಧ್ಯಾನೇಶ್ವರ್ ಮುಳೆ, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ಪಾಸ್ಪೋರ್ಟ್ಗೆ ಸಂಬಂಧಿಸಿದಂತೆ ಕಾರ್ಡ್ವೊಂದನ್ನು ನೀಡಲಾಗುತ್ತಿದೆ. ಇದನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಪ್ರಸ್ತುತ ಇದನ್ನು ಉಚಿತವಾಗಿ ನೀಡಲಾಗುತ್ತಿದ್ದು, ಮುಂದಿನ ದಿನದಲ್ಲಿ ಇದಕ್ಕೆ ಶುಲ್ಕ ನಿಗದಿ ಪಡಿಸಲಾಗುತ್ತದೆ. ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿ ಮಾಡಿಕೊಳ್ಳುವುದರಿಂದ ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯ ಅಧಿಕೃತ ಮಾಹಿತಿ ಲಭ್ಯವಾದಂತಾಗುತ್ತದೆ ಎಂದು ತಿಳಿಸಿದರು. ಸಂವಾದದ ವೇಳೆ ಭಾರತ ಹಾಗೂ ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ವೀಸಾ ಪಡೆಯುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆ, ಪೊಲೀಸ್ ಠಾಣೆಗೆ ಅಲೆಯಬೇಕಾದ ಸ್ಥಿತಿ ಮತ್ತಿತರ ವಿಚಾರಗಳನ್ನು ಸಚಿವರ ಗಮನಕ್ಕೆ ತರಲಾಯಿತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಸಚಿವರಿಂದ ದೊರೆಯಿತು. ಎನ್ಆರ್ಐಗಳ ಜತೆ ಮದುವೆಯಾಗಲಿ!
ಅನಿವಾಸಿ ಭಾರತೀಯ ಮತ್ತು ಮೂಲ ಭಾರತೀಯರ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಈ ಅಸಮತೋಲನ ನಿವಾರಿಸಿ ಸಮತೋಲನ ಕಾಯ್ದುಕೊಳ್ಳಲು ಭಾರತದ ಯುವಕರೊಂದಿಗೆ ಎನ್ಆರ್ಐ ಯುವತಿಯರು, ಭಾರತದ ಯುವತಿಯರೊಂದಿಗೆ ಎನ್ಆರ್ಐ ಯುವಕರು ಮದುವೆಯಾಗಬೇಕು ಎಂದು ಎಚ್.ಎಸ್. ಶರ್ಮಾ ಎಂಬುವವರು ನೀಡಿದ ಸಲಹೆ ಸಂವಾದದಲ್ಲಿ ಪಾಲ್ಗೊಂಡಿದ್ದವರನ್ನು ನಗೆಗಡಲಲ್ಲಿ ತೇಲಿಸಿತು. ವಿದೇಶದಲ್ಲಿನ ಭಾರತೀಯ ವಿದ್ಯಾರ್ಥಿಗಳ ಮತ್ತು ಭಾರತದಲ್ಲಿನ ಅನಿವಾಸಿ ಭಾರತೀಯ ವಿದ್ಯಾರ್ಥಿಗಳ ಸಮಸ್ಯೆಗಳು ಕುರಿತು ಸಚಿವ ಜಾವಡೇಕರ್ ಮುಕ್ತ ಸಲಹೆ ಸೂಚನೆ ಪಡೆಯುತ್ತಿದ್ದಾಗ, ಎದ್ದು ನಿಂತ ಶರ್ಮಾ ಈ ಸಲಹೆ ಮುಂದಿಟ್ಟಾಗ ಸಚಿವರಾದಿಯಾಗಿ ಇಡೀ ಸಭೆಯಲ್ಲಿ ನಗುವಿನ ಅಲೆ. ಆದರೆ, ವೇದಿಕೆ ನಿರ್ವಾಹಕರು, ಇದು ಸಂವಾದಕ್ಕೆ ಸಂಬಂಧಪಡುವುದಿಲ್ಲ ಎಂದು ಶರ್ಮಾ ಅವರನ್ನು ಸುಮ್ಮನಾಗಿಸಿದರು.