Advertisement

Rabkavi Banhatti ಕೆರೆ ರಸ್ತೆಯಲ್ಲಿ 20 ಕೆಜಿ ಗಾಂಜಾ ಗಿಡ ವಶ

06:35 PM Sep 28, 2023 | Team Udayavani |

ರಬಕವಿ-ಬನಹಟ್ಟಿ : ಬನಹಟ್ಟಿಯ ಕೆರೆಯ ರಸ್ತೆಯಲ್ಲಿ ಖಚಿತ ಮಾಹಿತಿ ಮೇರೆಗೆ ಅನಧಿಕೃತವಾಗಿ ಬೆಳೆದ ಗಾಂಜಾ ಗಿಡಗಳನ್ನು ಬನಹಟ್ಟಿ ಪೋಲೀಸರು ವಶಪಡಿಸಿಕೊಂಡ ಘಟನೆ ಗುರುವಾರ ನಡೆದಿದೆ.

Advertisement

ಬನಹಟ್ಟಿ ಪೊಲೀಸ್ ಠಾಣೆಯ ಪೊಲೀಸರು ಡಿವಾಯ್‌ಎಸ್‌ಪಿ ಜಮಖಂಡಿ, ಬನಹಟ್ಟಿ ಸಿಪಿಐ ಸಂಜೀವ ಬಳಗಾರರವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಘವೇಂದ್ರ ಖೋತ ಮತ್ತು ಅಪರಾಧ ವಿಭಾಗದ ಪಿಎಸ್‌ಐ ವಿಜಯ ಕಾಂಬಳೆ ಅವರು ಬನಹಟ್ಟಿ ಕೆರೆ ರೋಡಿಗೆ ಹೊಂದಿಕೊಂಡಿರುವ ರವಿ ಮನಿಗೆನಪ್ಪ ಹೆಂಡಿ ತನ್ನ ಜಮೀನಿನಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಬೆಳೆದಿರುವ ಗಾಂಜಾ ಗಿಡಗಳನ್ನು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.

ಈತನಿಂದ ಸುಮಾರು 15,900 ರೂಪಾಯಿ ಮೌಲ್ಯದ 20 ಕೆಜಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದು, ಈ ಕುರಿತು ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಧರೇಪ್ಪ ಕುಂಬಾರ, ಆನಂದ ಕೋಲೂರ, ಅಲ್ಲಾಬಕ್ಷ ಜಮಖಂಡಿ, ವಿಠ್ಠಲ ಅಜ್ಜನಗೌಡರ, ಎಂ. ಎಂ. ಪಟ್ಟಣಶೆಟ್ಟಿ, ರಾಜು ಆಲಗೂರ. ಸದಾಶಿವ ಬಡ್ಡೂರ, ಮುತ್ತಣ್ಣ ಅಜ್ಜನ್ನವರ, ಬೈರು ಚೌಲಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next