Advertisement

ಭದ್ರತಾ ಪಡೆ ಜತೆಗೆ ಸಂಘರ್ಷ: 20 ಪ್ರತಿಭಟನಕಾರರಿಗೆ ಗಾಯ

04:43 PM Apr 15, 2017 | udayavani editorial |

ಶ್ರೀನಗರ : ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ಭದ್ರತಾ ಪಡೆಗಳು ಮತ್ತು ಪ್ರತಿಭಟನಕಾರರ ನಡುವೆ ಏರ್ಪಟ್ಟ ಸಂಘರ್ಷದಲ್ಲಿ ಕನಿಷ್ಠ 20 ಮಂದಿ ಗಾಯಗೊಂಡರು.

Advertisement

ಪುಲ್ವಾಮಾದ ಡಿಗ್ರಿ ಕಾಲೇಜಿನ ಸಮೀಪ ಇಂದು ಮಧ್ಯಾಹ್ನ ಯುವಕರ ಗುಂಪೊಂದು ಘೋಷಣೆಗಳನ್ನು ಕೂಗುತ್ತಾ ಭದ್ರತಾ ಪಡೆಗಳ ಮೇಲೆ ಕಲ್ಲೆಸೆತಕ್ಕೆ ತೊಡಗಿತು. ಭದ್ರತಾ ಪಡೆಗಳು ಉದ್ರಿಕ್ತರನ್ನು ನಿಯಂತ್ರಿಸಲು ಮೊದಲು ಲಾಠೀ ಚಾರ್ಜ್‌ ಮಾಡಿದರು. ಅನಂತರದಲ್ಲಿ ಅಶ್ರು ವಾಯು ಕೋಶಗಳನ್ನು ಸಿಡಿಸಿದರು. ಈ ಸಂಘರ್ಷದಲ್ಲಿ ಸುಮಾರು 20 ಮಂದಿ ಪ್ರತಿಭಟಕಾರರು ಗಾಯಗೊಂಡರು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಭದ್ರತಾ ಪಡೆಗಳು ಮೊದಲಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಗಾಳಿಯಲ್ಲಿ ಗುಂಡು ಹಾರಿಸಿದರೆಂದು ದೃಢಪಡದ ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next