Advertisement

ಹುಣಸೂರು : ಬಕೆಟ್ ಗೆ ಬಿದ್ದು 2 ವರ್ಷದ ಮಗು ಸಾವು

04:38 PM Jun 18, 2021 | Team Udayavani |

ಹುಣಸೂರು :  ನೀರು ತುಂಬಿದ್ದ ಬಕೆಟ್ ಗೆ ಬಿದ್ದ 2 ವರ್ಷದ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ತಾಲೂಕಿನ ತರಿಕಲ್ ಗ್ರಾಮದಲ್ಲಿ ನಡೆದಿದೆ. ಹುಣಸೂರು ತಾಲೂಕಿನ ತರಿಕಲ್ ಗ್ರಾಮದ ಸುಂದರರಾಜ್ ರ ಪುತ್ರ ಸಮರ್ಥ್ ಎರಡೂವರೆ ವರ್ಷದ  ಮಗು ಸಾವನ್ನಪ್ಪಿದೆ.

Advertisement

ಘಟನೆ ವಿವರ : ಧರ್ಮಪುರ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಂದರರಾಜ್ ಅವರಿಗೆ ಎರಡು ಹೆಣ್ಣು ಒಂದು ಗಂಡುಮಗು ವಿದ್ದು. ಬಚ್ಚಲುಮನೆಯಲ್ಲಿ ಇಟ್ಟಿದ್ದ ದೊಡ್ಡ ಬಕೆಟ್ ನೀರಿನಲ್ಲಿ ನೀರು ತೆಗೆದುಕೊಳ್ಳಲು ಹೋಗಿದ್ದ ಮಗು ಸಮರ್ಥ ಮಕಾಡೆ ಬಿದ್ದಿದೆ.

ಮನೆಯವರಿಗೆ ಗೊತ್ತಾಗಿಲ್ಲ!

ಅಕ್ಕಂದಿರೊಂದಿಗೆ ಆಟವಾಡುತ್ತಿದ್ದ ಪುತ್ರ ಸಮಥ್೯ ಕಾಣೆಯಾದಾಗ ಹುಡುಕಾಟ ನಡೆಸಿದ್ದಾರೆ. ಬಚ್ಚಲು ಮನೆಯ ಬಕೆಟ್ ನಲ್ಲಿ ಮಗು ಬಿದ್ದಿರುವುದನ್ನು ಕಂಡು ಮೇಲೆತ್ತಿದರಾದರೂ ಅದಾಗಲೆ ಸಾವನ್ನಪ್ಪಿತ್ತು. ರಾತ್ರಿಯೇ ಅಂತ್ಯಸಂಸ್ಕಾರ ಮಾಡಲಾಗಿದ್ದು ಶಾಸಕ ಮಂಜುನಾಥ್ ಮಗುವಿನ ಅಂತ್ಯಸಂಸ್ಕಾರ ಮುಗಿಯುವವರೆಗೂ ಇದ್ದು ಪೋಷಕರಿಗೆ ಸಾಂತ್ವನ ಹೇಳಿದರು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next