Advertisement
ಸೋಮವಾರ ಸಾಯಂಕಾಲ ಜುವೆಲ್ಲರ್ಸ್ಗೆ ಬಂದ ಇಬ್ಬರು ಅಪರಿಚಿತ ಮಹಿಳೆ ಹಾಗೂ ಓರ್ವ ಪುರುಷ ಶೋರೂಂನ ನೆಲ ಅಂತಸ್ತಿನ ಸಿಬಂದಿಯ ಗಮನಕ್ಕೆ ಬಾರದ ರೀತಿಯಲ್ಲಿ ಟ್ರೇಯಲ್ಲಿದ್ದ ಸುಮಾರು 2,35,000 ರೂ. ಮೌಲ್ಯದ ಕರಿಮಣಿ ಸರಗಳನ್ನು ಕಳವುಗೈದಿದ್ದಾರೆ ಎಂದು ಶೋರೂಂನ ಮ್ಯಾನೇಜರ್ ಸತೀಶ ಪ್ರಭು ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಂಡೀಮಠದಲ್ಲಿರುವ ಬಟ್ಟೆ ಮಳಿಗೆ ಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸ್ವತ್ತುಗಳನ್ನು ಕಳವುಗೈದಿದ್ದಾರೆ. ಇಲ್ಲಿನ ಫ್ಯಾಕ್ಟರೀಸ್ ಬಟ್ಟೆ ಮಳಿಗೆಗೆ ಮಧ್ಯಾಹ್ನ ಎರಡು ಬಾರಿ ನುಗ್ಗಿದ ಕಳ್ಳರು ಗ್ರಾಹಕರ ಸೋಗಿನಲ್ಲಿ ಮಳಿಗೆಯ ಸಿಬಂದಿಗೆ ತಿಳಿಯದ ಹಾಗೆ ಬಟ್ಟೆಯನ್ನು ಸೀರೆಯ ಮರೆಯಲ್ಲಿ ಅಡಗಿಸಿಟ್ಟು ಪರಾರಿಯಾಗಿದ್ದಾರೆ.
Related Articles
Advertisement
ಆ ಬಳಿಕ ಬಂದ ಓರ್ವ ಗಂಡಸು, ಇಬ್ಬರು ಹೆಂಗಸರು ಹಾಗೂ ಓರ್ವ ಯುವಕ ಕೂಡ ಬಟ್ಟೆಗಳನ್ನು ಸೀರೆಯ ಮರೆಯಲ್ಲಿ ಅಡಗಿಸಿ ಕಳವುಗೈದಿದ್ದಾರೆ.
ಕಳವುಗೈದ ವ್ಯಕ್ತಿಗಳು ಒಂದೇ ಗುಂಪಿನವರಾಗಿದ್ದು ಇವರ ಚಲನವಲನಗಳು ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಪೊಲೀಸರು ಕಳ್ಳರನ್ನು ಹಿಡಿಯಲು ಶೋಧ ಚುರುಕುಗೊಳಿಸಿದ್ದಾರೆ.