Advertisement

ಶಿವಸೇನೆಯ ಏಕನಾಥ ಶಿಂಧೆ ಬಣಕ್ಕೆ “ಕತ್ತಿ-ಗುರಾಣಿ’ಚಿಹ್ನೆ

06:50 PM Oct 11, 2022 | Team Udayavani |

ನವದೆಹಲಿ: ಶಿವಸೇನೆಯ ಏಕನಾಥ ಶಿಂಧೆ ಬಣಕ್ಕೆ ಮಂಗಳವಾರ ಚುನಾವಣಾ ಆಯೋಗವು “ಎರಡು ಕತ್ತಿ ಮತ್ತು ಒಂದು ಗುರಾಣಿ’ಯ ಚಿಹ್ನೆಯನ್ನು ನೀಡಿದೆ.

Advertisement

ಅಂಧೇರಿ ಪೂರ್ವ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯಲ್ಲಿ “ಬಾಳಾಸಾಹೇಬಂಚಿ ಶಿವಸೇನಾ’ ಎಂಬ ಹೆಸರಿನಲ್ಲಿ ಶಿಂಧೆ ಬಣವು ಇದೇ ಚಿಹ್ನೆಯೊಂದಿಗೆ ಕಣಕ್ಕಿಳಿಯಲಿದೆ.

ನ.3ರಂದು ಚುನಾವಣೆ ನಡೆಯಲಿದೆ. ಶಿಂಧೆ ಬಣವು “ಅರಳಿ ಮರ’, “ಕತ್ತಿ-ಗುರಾಣಿ’ ಮತ್ತು “ಸೂರ್ಯ’ ಚಿಹ್ನೆ ಗಳನ್ನು ತಮ್ಮ 3 ಆಯ್ಕೆಗಳಾಗಿ ಚುನಾವಣಾ ಆಯೋಗದ ಮುಂದಿಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next