Advertisement

Bangalore: ಅಪಘಾತ ಎಸಗಿದ ಬೈಕ್‌ ಸವಾರನಿಗೆ 2 ತಿಂಗಳ ಜೈಲು

10:52 AM Nov 19, 2023 | Team Udayavani |

ಬೆಂಗಳೂರು: ರೆಡ್‌ ಸಿಗ್ನಲ್‌ ಬಿದ್ದಿದ್ದರೂ ಅತೀವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ವೃದ್ಧರೊಬ್ಬರ ಸಾವಿಗೆ ಕಾರಣವಾದ ಬೈಕ್‌ ಸವಾರನಿಗೆ ಕೋರ್ಟ್‌ ಆರು ವರ್ಷಗಳ ಬಳಿಕ ಎರಡು ತಿಂಗಳ ಶಿಕ್ಷೆ ಹಾಗೂ ದಂಡ ವಿಧಿಸಿದೆ.

Advertisement

ನಗರದ ನಿವಾಸಿ ಪ್ರಕಾಶ್‌ ಕುಂಬಾರ್‌ ಶಿಕ್ಷೆಗೊಳಗಾದ ದ್ವಿಚಕ್ರ ವಾಹನ ಸವಾರ. ಆರು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ವಿ.ಎಸ್‌.ರಾಜಕುಮಾರ್‌(68) ಎಂಬುವರು ಮೃತಪಟ್ಟಿದ್ದರು. 2017ರ ಮೇ 12ರಂದು ಮೃತರಾದ ರಾಜಕುಮಾರ್‌ ಬೈಕ್‌ನಲ್ಲಿ ಕಮರ್ಷಿಯಲ್‌ ಸ್ಟ್ರೀಟ್‌ ಕಡೆಯಿಂದ ಎಂ.ಜಿ.ಸ್ತೆ ಕಡೆ ಹೋಗುತ್ತಿದ್ದರು. ಅದೇ ವೇಳೆ ಕಬ್ಬನ್‌ ರಸ್ತೆ ಮಣಿಪಾಲ್‌ ಸೆಂಟರ್‌ ಕಡೆಯಿಂದ ಬಿ.ಆರ್‌.ವಿ. ಜಂಕ್ಷನ್‌ ಕಡೆ ಬರುತ್ತಿದ್ದ ಅಪರಾಧಿ ಪ್ರಕಾಶ್‌ ಕುಂಬಾರ್‌ ರೆಡ್‌ ಸಿಗ್ನಲ್‌ ಬಂದಿದ್ದರೂ ಅತೀವೇಗ ಮತ್ತು ನಿರ್ಲಕ್ಷ್ಯ ದಿಂದ ಬೈಕ್‌ ಚಾಲನೆ ಮಾಡಿ ರಾಜ್‌ಕುಮಾರ್‌ ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಕೆಳಗೆ ಬಿದ್ದಿದ್ದ ರಾಜ್‌ಕುಮಾರ್‌ ತಲೆಗೆ ಗಂಭೀರ ಪೆಟ್ಟು ಬಿದ್ದಿತ್ತು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ರಾಜಕುಮಾರ್‌ 2017ರ ಮೇ 17ರಂದು ಮೃತಪಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡಿದ್ದ ಶಿವಾಜಿನಗರ ಸಂಚಾರ ಪೊಲೀ ಸರು ಆರೋಪಿಯ ವಿರುದ್ಧ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿ ದ್ದರು.ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್‌ ಆರೋಪಿಗೆ 60 ದಿನಗಳ ಕಾಲ ಸದಾ ಶಿಕ್ಷೆ ಹಾಗೂ 11,500 ರೂ. ದಂಡ ವಿಧಿಸಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next