Advertisement

Delhi; ದರೋಡೆಕೋರರು ಎಂದು ಭಾವಿಸಿ ಸ್ನೇಹಿತರಿಬ್ಬರ ಕೊಲೆ; ನಾಲ್ವರ ಬಂಧನ

10:51 AM Mar 24, 2024 | Team Udayavani |

ಹೊಸದಿಲ್ಲಿ: ದರೋಡೆಕೋರರು ಎಂದು ತಪ್ಪು ಗ್ರಹಿಸಿ ಇಬ್ಬರು ಸ್ನೇಹಿತರನ್ನು ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ದೆಹಲಿಯ ರಣಹೊಳ್ಳ ಪ್ರದೇಶದಲ್ಲಿ ಕಳೆದ ಶುಕ್ರವಾರ ರಾಜೇಶ್ ಯಾದವ್ ಮತ್ತು ಮುಕೇಶ್ ಸಿಂಗ್ ಎಂಬವರ ಭೀಕರ ಹತ್ಯೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ನಾಲ್ವರ ಸ್ನೇಹಿತರನ್ನು ಮಾರ್ಚ್ 15 ರಂದು ಇಬ್ಬರು ವ್ಯಕ್ತಿಗಳು ದರೋಡೆ ಮಾಡಿದ್ದರು. ಅದಕ್ಕೆ ತಕ್ಕ ಪಾಠ ಕಲಿಸಲೆಂದು ನಾಲ್ಕು ಮಂದಿ ದರೋಡೆಕೋರರನ್ನು ಹುಡುಕಲು ಪ್ರಾರಂಭಿಸಿದ್ದರು. ಎರಡು ದಿನಗಳ ನಂತರ, ದರೋಡೆಕೋರರು ಆ ಪ್ರದೇಶದ ಬಾರ್‌ ನಲ್ಲಿ ಮದ್ಯಪಾನ ಮಾಡುತ್ತಿದ್ದಾರೆಂಬ ಮಾಹಿತಿ ಅವರಿಗೆ ಸಿಕ್ಕಿತು.

ದರೋಡೆಕೋರರ ಸಹಚರರು ಎಂದು ಭಾವಿಸಿ ನಾಲ್ವರು ರಾಜೇಶ್ ಯಾದವ್ ಮತ್ತು ಮುಖೇಶ್ ಸಿಂಗ್ ಮೇಲೆ ಚಾಕು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.

ರಾಜೇಶ್ ಮತ್ತು ಮುಖೇಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಬರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.

Advertisement

ಗೌರವ್ ಕುಮಾರ್, ಕೇಶ್ರಿ ಕುಮಾರ್ ಪಾಂಡೆ, ಸಂದೇಶ್ ಕುಮಾರ್ ಮತ್ತು ಗೌರವ್ ಸಿಂಗ್ ರನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next