Advertisement

ಬೆಂಕಿ ನಿಯಂತ್ರಣ ವೇಳೆ ಇಬ್ಬರ ಸಾವು

07:49 AM Jun 11, 2020 | mahesh |

ದಿಬ್ರೂಗಢ/ಗುವಾಹಾಟಿ: ಅಸ್ಸಾಂನ ತಿನ್ಸು ಕಿಯಾ ಜಿಲ್ಲೆಯ ಬಗ್ಜಾನ್‌ನಲ್ಲಿರುವ ಆಯಿಲ್‌ ಇಂಡಿಯಾ ಲಿಮಿಟೆಡ್‌ನ‌ ತೈಲ ಬಾವಿಯಲ್ಲಿ ಉಂಟಾಗಿರುವ ಬೆಂಕಿಯನ್ನು ನಂದಿಸುವ ಪ್ರಯತ್ನದಲ್ಲಿರುವ ವೇಳೆ ಇಬ್ಬರು ಅಗ್ನಿಶಾಮಕ ದಳ ಸಿಬ್ಬಂದಿ ಅಸುನೀಗಿದ್ದಾರೆ. 14 ದಿನಗಳಿಂದ ಅಲ್ಲಿ ಅನಿಲ ಸೋರಿಕೆ ಯಾಗುತ್ತಿತ್ತು. ಮಂಗಳ ವಾರ ತೈಲ ಬಾವಿಯಿಂದ ಬೃಹತ್‌ ಪ್ರಮಾಣದಲ್ಲಿ ಬೆಂಕಿ ಹೊರ ಬರಲಾರಂಭಿಸಿತ್ತು.

Advertisement

ಸುಮಾರು 30 ಕಿ.ಮೀ. ವ್ಯಾಪ್ತಿಯವರೆಗೆ ಹೊಗೆ ಹಬ್ಬಿದ್ದು, ಹಲವು ಮೀಟರ್‌ ಎತ್ತರದಲ್ಲಿ ಬೆಂಕಿ ವ್ಯಾಪಕವಾಗಿ ಉರಿಯುತ್ತಿದೆ. ಅವಘಡದಿಂದ 50ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾಗಿವೆ. ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡಗಳು ಹಾಗೂ ಸಿಂಗಾಪುರದ ತಜ್ಞರ ತಂಡಗಳು ತೊಡಗಿಸಿಕೊಂಡಿವೆ. ಸೇನಾ ಪಡೆ ಕೂಡ ಬೆಂಕಿ ನಂದಿಸುವ ಕಾರ್ಯಕ್ಕೆ ನೆರವಾ ಗುತ್ತಿದೆ. ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಅಸ್ಸಾಂ ಸರಕಾರ‌ ಕೇಂದ್ರದ ನೆರವು ಕೋರಿದೆ. ಘಟನಾ ಸ್ಥಳದಿಂದ 1.5 ಕಿ.ಮೀ. ಸುತ್ತ   ಮುತ್ತಲಿನ ಗ್ರಾಮಗಳ ಕನಿಷ್ಠ 6 ಸಾವಿರ ಮಂದಿ ಯನ್ನು ಸುರಕ್ಷಿತಾ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಅವಘಡದಿಂದ ತೊಂದರೆಗೊಳಗಾದ ಕುಟುಂಬಕ್ಕೆ ತಲಾ 30 ಸಾವಿರ ರೂ. ಪರಿಹಾರ ನೀಡುವುದಾಗಿ ಒಐಎಲ್‌ ಘೋಷಿಸಿದೆ.

ಪ್ರಧಾನಿ ಭರವಸೆ: ಪ್ರಧಾನಿ ನರೇಂದ್ರ ಮೋದಿ ಘಟನೆ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೊನೊವಾಲ್‌ ಜತೆಗೆ ಮಾತುಕತೆ ನಡೆಸಿದ್ದಾರೆ. ರಾಜ್ಯ ಸರಕಾರ‌ಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಪ್ರಧಾನಿ ತಿಳಿಸಿದ್ದಾರೆ. ಪ್ರಧಾನಿ ಜತೆಗಿನ ಮಾತುಕತೆ ಬಗ್ಗೆ ಅಸ್ಸಾಂ ಸಿಎಂ ಸೊನೊವಾಲ್‌ ಟ್ವೀಟ್‌ ಡಿದ್ದಾರೆ.

ಇಬ್ಬರ ಸಸ್ಪೆಂಡ್‌: ಮೇ 27ರಂದೇ ತೈಲ ಬಾವಿ ಬಳಿ ಅನಿಲ ಸೋರಿಕೆ ಪ್ರಕರಣ ಗೊತ್ತಾಗಿದ್ದರೂ, ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಆಯಿಲ್‌ ಇಂಡಿಯಾ ಲಿಮಿಟೆಡ್‌ ಸಸ್ಪೆಂಡ್‌ ಮಾಡಿದೆ. ಸಂಸ್ಥೆಯ ಅಧ್ಯಕ್ಷ ಸುಶೀಲ್‌ ಚಂದ್ರ ಮಿಶ್ರಾ ಪ್ರಕರಣದ ಬಗ್ಗೆ ಐವರು ಸದಸ್ಯರಿರುವ ಸಮಿತಿ ರಚಿಸುವುದಾಗಿ ತಿಳಿಸಿದ್ದರು. ಜತೆಗೆ ನಿರ್ವಹಣೆ ಹೊಣೆ ಇರುವ ಖಾಸಗಿ ಸಂಸ್ಥೆಗೆ ನೋಟಿಸ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next