Advertisement

Maharashtra: 2 ದಶಕಗಳ ಹಿಂದಿನ ಹಣಕಾಸು ಅಕ್ರಮ ಕಾಂಗ್ರೆಸ್‌ ಶಾಸಕ ಸುನೀಲ್‌ ಅನರ್ಹ

10:56 PM Dec 24, 2023 | Pranav MS |

ಮುಂಬಯಿ: ನಾಗ್ಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ (ಎನ್‌ಡಿಸಿಸಿಬಿ) 20 ವರ್ಷ (2002)ಗಳ ಹಿಂದೆ ನಡೆದಿದ್ದ 125 ಕೋಟಿ ರೂ. ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಸುನೀಲ್‌ ಕೇದಾರ್‌ ಅನರ್ಹಗೊಂಡಿದ್ದಾರೆ. ಈ ಬಗ್ಗೆ ನಾಗ್ಪುರದ ವಿಶೇಷ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಡಿ.22ರಂದು ತೀರ್ಪು ನೀಡಿ, ಮಾಜಿ ಸಚಿವ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು.

Advertisement

ಜತೆಗೆ ಅವರಿಗೆ 5 ವರ್ಷಗಳ ಕಾಲ ಕಠಿನ ಸಜೆಯನ್ನೂ ವಿಧಿಸಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಇತರ 6 ಮಂದಿ ಆರೋಪಿ ಗಳಿಗೆ ತಲಾ 10 ಲಕ್ಷ ರೂ. ದಂಡ ಮತ್ತು ಕಾರಾಗೃಹ ವಾಸ ಶಿಕ್ಷೆ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ರಾಜ್ಯ ಶಾಸಕಾಂಗ ಕಾರ್ಯಾಲಯವು ಸುನೀಲ್‌ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಪ್ರಕಟನೆಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next