Advertisement

ಒಡಿಶಾ ಸಂತ್ರಸ್ತರಿಗೆ 2 ಕೋಟಿ ದೇಣಿಗೆ

07:08 AM Jun 20, 2019 | Team Udayavani |

ಬೆಂಗಳೂರು: ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದ ಬಿಇಎಂಎಲ್‌ ಸಂಸ್ಥೆ, ಪ್ರಕೃತಿವಿಕೋಪಕ್ಕೆ ತುತ್ತಾದ ಒಡಿಶಾ ರಾಜ್ಯಕ್ಕೆ 2 ಕೋಟಿ ರೂ. ದೇಣಿಗೆ ನೀಡಿದೆ.

Advertisement

ಇತ್ತೀಚೆಗೆ ಒಡಿಶಾದಲ್ಲಿ ಫ‌ನಿ ಚಂಡಮಾರುತಕ್ಕೆ ಹಲವು ಜೀವಗಳು ಬಲಿಯಾಗಿ, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರಿಗೆ ಬಿಇಎಂಎಲ್‌ ವ್ಯವಸ್ಥಾಪಕ ನಿರ್ದೇಶಕ ದೀಪಕ್‌ ಕುಮಾರ್‌ ಹೊಟಾ ಅವರು 2 ಕೋಟಿ ರೂ.ಗಳ ಚೆಕ್‌ ಹಸ್ತಾಂತರಿಸಿದರು.

ಈ ಹಿಂದೆ ಕರ್ನಾಟಕ ಹಾಗೂ ಕೇರಳದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗಲೂ ಬಿಇಎಂಎಲ್‌ ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next