Advertisement

Koppala: ವ್ಯರ್ಥ್ಯವಾಗಿ ಹರಿಯುವ ನೀರು ಕಂಡು ಭಾವುಕರಾದ ತಜ್ಞ ಕನ್ಹಯ್ಯ ನಾಯ್ಡು

11:52 AM Aug 13, 2024 | Team Udayavani |

ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಅಪಾರ ನೀರು ನದಿಪಾತ್ರಕ್ಕೆ ಹರಿದು ಹೋಗುತ್ತಿರುವುದಕ್ಕೆ ತಜ್ಞ ಕನ್ಹಯ್ಯ ನಾಯ್ಡು ಅವರು ಬಾವುಕರಾಗಿದ್ದಾರೆ.

Advertisement

ತುಂಗಭದ್ರಾ ಬೋರ್ಡ್ ಹಾಗೂ ನೀರಾವರಿ ಅಧಿಕಾರಿ ವರ್ಗವು ತಜ್ಞ ಕನ್ನಯ್ಯ ಅವರನ್ನು ಗೇಟ್ ಅಳವಡಿಕೆಗೆ ಸಲಹೆ ಕೇಳಲು ಡ್ಯಾಂಗೆ ಆಹ್ವಾನ ಮಾಡಿದ್ದು ಅವರು ಗೇಟ್ ಮುರಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಹರಿಸದೇ ನೀರನ್ನು ಉಳಿಸಿಕೊಂಡು ಸಹ ತುಂಗಭದ್ರಾ ಡ್ಯಾಮ್‌ಗೆ ಹೊಸ ಗೇಟ್ ಅಳವಡಿಸಬಹುದು ಎಂಬುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ತುಂಗಭದ್ರಾ ಬೋರ್ಡ್ ಕಾರ್ಯದರ್ಶಿ, ಕರ್ನಾಟಕ ನೀರಾವರಿ ನಿಗಮದ ಕಾರ್ಯದರ್ಶಿ, ಆಂಧ್ರಪ್ರದೇಶದ ನೀರಾವರಿ ಇಲಾಖೆಯ ಕಾರ್ಯದರ್ಶಿ, ಕರ್ನಾಟಕ ನೀರಾವರಿ ನಿಗಮದ ಎಂ.ಡಿ., ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್, ನ್ಯಾಷನಲ್ ಡ್ಯಾಮ್ ಸೇಫ್ಟಿ ಏಜೆನ್ಸಿಯ ಮುಖ್ಯ ಎಂಜಿನಿಯರ್, ಜೆಎಸ್‌ಡಬ್ಲೂ ಎಕ್ಸ್ ಪರ್ಟ್, ಹಿಂದುಸ್ತಾನ್ ಸ್ಟೀಲ್ ವರ್ಕ್, ನಾರಾಯಣ ಸ್ಟೀಲ್ ವರ್ಕ್ ಗೇಟ್ ತಜ್ಞರು ಸೇರಿದಂತೆ ಇನ್ನೀತರ ತಜ್ಞರೊಂದಿಗೆ ಸಚಿವರು, ಸಂಸದರು, ಶಾಸಕರು ಮಾತುಕತೆ ನಡೆಸಿದ್ದಾರೆ. ವಿಜಯನಗರ ಡಿಸಿ ಎಂ.ಎಸ್.ದಿವಾಕರ, ಕೊಪ್ಪಳ ಡಿಸಿ ನಳಿನ್ ಅತುಲ್ ಅವರೊಂದಿಗೆ ಸಹ ಚರ್ಚಿಸುವ ವೇಳೆ

ವೇಳೆಯಲ್ಲಿ ತಜ್ಞ ಕನ್ಹಯ್ಯ ನಾಯ್ಡು ಅವರು, ‘ನಾನು ಇಲ್ಲಿಯೇ ನೌಕರಿ ಮಾಡಿದ್ದೇನೆ. ತುಂಗಭದ್ರಾ ನದಿಯ ನೀರು ಕುಡಿದು ಬೆಳೆದಿದ್ದೇನೆ. ಈ ಭಾಗದ ಜನರ ಜೀವನಾಡಿಯಾದ ತುಂಗಭದ್ರಾ ಮಡಿಲಿನಿಂದ ನೀರು ವ್ಯರ್ಥವಾಗಿ ಹರಿಯುತ್ತಿರುವುದು ನೋಡಿ ಮರುಗುತ್ತಿದ್ದೇನೆ ಎಂದು ಭಾವುಕರಾದರು.

ಬೇರೆ ಬೇರೆ ಡ್ಯಾಂಗೆ ಯಾವುದೇ ರೀತಿಯ ಅವಘಡಗಳಿಗೆ ಅವಕಾಶವಿಲ್ಲದಂತೆ ತಮ್ಮ ಮಾರ್ಗದರ್ಶನದಲ್ಲಿ ಎಂಜಿನಿಯರಗಳ ತಂಡವು ಹೊಸ ಗೇಟ್ ಅಳವಡಿಸಿ ಯಶ ಕಂಡಿದ್ದರ ಬಗ್ಗೆ ಅವರು ತಮ್ಮ ಅನುಭವ ಹಂಚಿಕೊಂಡರು.

Advertisement

ಸಿಎಂ ಜೊತೆಗೆ ಮಾತುಕತೆಗೆ ಅವಕಾಶ :  ಜಲಾಶಯಕ್ಕೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡ್ಯಾಮ್‌ಗೆ ಭೇಟಿ ನೀಡುತ್ತಿದ್ದು, ತಲಾ 12 ಅಡಿಯ 5 ಸೆಗ್ಮೇಂಟ್‌ಗಳನ್ನು ಕ್ರೇನ್ ಮೂಲಕ ಕೆಳಗಿಳಿಸಿ ನೀರು ತಡೆ ಹಿಡಿಯಬಹುದು ಎನ್ನುವ ಸಲಹೆಯ ಬಗ್ಗೆ  ಮುಖ್ಯಮಂತ್ರಿಗಳೊಂಡಿಗೆ ಮಾತುಕತೆ ನಡೆಸಲು ತಮಗೆ ಅವಕಾಶ ಕಲ್ಪಿಸಿಕೊಡುವುದಾಗಿ ಚರ್ಚೆಯ ವೇಳೆ ಕನ್ಹಯ್ಯ ನಾಯ್ಡು ಅವರಿಗೆ ಸಚಿವರು, ಸಂಸದರು, ಶಾಸಕರು ತಿಳಿಸಿದರು. ಈಗ ಹಾಳಾಗಿರುವ ಗೇಟ್ ಒಟ್ಟು 60 ಅಡಿ ಉದ್ದ ಇದೆ. ಇಲ್ಲಿ ತಲಾ 12 ಅಡಿಯ 5 ಸೆಗ್ಮೇಂಟ್‌ಗಳನ್ನು ಕ್ರೇನ್ ಮೂಲಕ ಕೆಳಗಿಳಿಸಿ ನೀರನ್ನು ತಡೆ ಹಿಡಿಯಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜಿಂದಾಲ್ ಸೇರಿದಂತೆ ನಾನಾ ಕಡೆ ಸೆಗ್ಮೇಂಟ್‌ಗಳ ತಯಾರಿ ನಡೆಯುತ್ತಿದೆ ಎಂದು ನೀರಾವರಿ ನಿಗಮದ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರಿಗೆ ಮಾಹಿತಿ ನೀಡಿದರು.

ಡ್ಯಾಂ ಎಕ್ಸಪರ್ಟ್ ಜೊತೆ ಮಾತುಕಥೆ :

ಆಲಮಟ್ಟಿ, ನಾರಾಯಣಪುರ, ಕೆಆರ್‌ಎಸ್ ಸೇರಿದಂತೆ ಹಲವಾರು ಜಲಾಯಶಯಗಳಿಗೆ ಗೇಟ್ ಅಳವಡಿಸಿದ ನ್ಯಾಷನಲ್ ಡ್ಯಾಮ್ ಗೇಟ್ ಎಕ್ಸ್ ಪರ್ಟ್ ಕನ್ನಯ್ಯ ನಾಯ್ಡು ಅವರ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದರಾದ ರಾಜಶೇಖರ್ ಹಿಟ್ನಾಳ, ಶಾಸಕ ಎಚ್.ಆರ್. ಗವಿಯಪ್ಪ ಮತ್ತು ಹಂಪನಗೌಡ ಬಾದರ್ಲಿ ಅವರು ಸುಧೀರ್ಘ ಸಮಯ ಮಾತುಕತೆ ನಡೆಸಿ ಹೊಸ ಗೇಟ್ ಅಳವಡಿಕೆಯ ಬಗ್ಗೆ ಸಲಹೆ ಪಡೆದುಕೊಂಡರು.

ಕರ್ನೂಲ್ ಸಂಸದರು ಭೇಟಿ: ಕರ್ನೂಲ್ ಸಂಸದರಾದ ಪಂಚಲಿಂಗ ನಾಗರಾಜ, ಆಲೂರು ಮತ್ತು ಮಂತ್ರಾಲಯದ ಮುಖಂಡರಾದ ವೀರಭದ್ರಗೌಡ, ರಾಘವೇಂದ್ರ ರೆಡ್ಡಿ ಅವರು ಟಿ.ಬಿ.ಡ್ಯಾಮ್‌ಗೆ ಭೇಟಿ ನೀಡಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಕೊಪ್ಪಳ ಹಾಗೂ ವಿಜಯನಗರ ಮತ್ತು ಸಿಂಧನೂರ ಶಾಸಕರೊಂದಿಗೆ ಗೇಟ್ ದುರಸ್ತಿಯ ಬಗ್ಗೆ ಚರ್ಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next