Advertisement

ಬೆಳ್ತಂಗಡಿ ಸಿಯೋನ್ ಆಶ್ರಮದಲ್ಲಿ 194 ಪಾಸಿಟಿವ್ ಪ್ರಕರಣ

02:27 PM May 30, 2021 | Team Udayavani |

ಬೆಳ್ತಂಗಡಿ: ಅನಾಥರು ಹಾಗೂ ನಿರ್ಗತಿಕರನ್ನು ಸಲಹುವ ಬೆಳ್ತಂಗಡಿ ತಾಲೂಕಿನ ಗಂಡುಬಾಗಿಲು ಸಿಯೋನ್ ಆಶ್ರಮದಲ್ಲಿ 194 ಪಾಸಿಟಿವ್ ಪ್ರಕರಣ ದಾಖಲಾಗಿದೆ.

Advertisement

ಶಾಸಕ ಹರೀಶ್ ಪೂಂಜ ಅವರು  ರವಿವಾರ ಆಶ್ರಮಕ್ಕೆ ಭೇಟಿ ಮಾಡಿ ಆಶ್ರಮದಲ್ಲಿ ಎ ಸಿಮ್ಟಮ್ ಇರುವ ಮಂದಿಯನ್ನು ಧರ್ಮಸ್ಥಳದ ರಜತಾದ್ರಿ ಕ್ವಾರೆಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಆಶ್ರಮದಲ್ಲಿ ಒಟ್ಟು 270 ಮಂದಿಯಿದ್ದು, ಅವುಗಳ ಪೈಕಿ ಎಲ್ಲರ ಪರೀಕ್ಷೆ ನಡೆಸಲಾಗಿತ್ತು. ಈ ಪೈಕಿ ಮೇ 30 ಕ್ಕೆ 194 ಪ್ರಕರಣ ದಾಖಲಾಗಿತ್ತು‌.

ಈಗಾಗಲೆ ಓರ್ವ ಆಶ್ರಮವಾಸಿ ಪಾಸಿಟಿವ್ ಬಂದು ಮೃತಪಟ್ಟಿದ್ದರಿಂದ ಆರೋಗ್ಯ ಇಲಾಖೆಗೆ ಸೂಚಿಸಿ ಸ್ಥಳಾಂತರಿಸಲಾಯಿತು.

ಇದನ್ನೂ ಓದಿ: ತೆಂಕಿಲ : ಮಹಿಳೆಯೋರ್ವರ ಕರಿಮಣಿ ಸರ ಎಳೆದು ಬೈಕ್ ನಲ್ಲಿ ಪರಾರಿಯಾದ ಅಪರಿಚಿತರು

Advertisement

ರಜತಾದ್ರಿಯಲ್ಲಿ 600 ಬೆಡ್ ಅವಕಾಶವಿದ್ದು,  300 ಕೊಠಡಿಗಳಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕ್ವಾರೆಂಟೈನ್ ಕೇಂದ್ರಕ್ಕಾಗಿ ಬಿಟ್ಟುಕೊಟ್ಟಿದ್ದರು. ಹೀಗಾಗಿ ಬಹಳಷ್ಟು ಅವಕಾಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next