ಬೆಂಗಳೂರು: ರಾಜ್ಯದಲ್ಲಿ ಬುಧವಾರ 181 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 222 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಅನಾರೋಗ್ಯದಿಂದ ಬಳುತ್ತಿದ್ದ ಕೋವಿಡ್ ಸೋಂಕಿತರಲ್ಲಿ ಧಾರವಾಡ, ಮಂಡ್ಯ ಜಿಲ್ಲೆಯಲ್ಲಿ ತಲಾ ಒಂದು ಮರಣ ಪ್ರಕರಣ ದಾಖಲಾಗಿದೆ.
ರಾಜ್ಯಾದ್ಯಂದ 2937 ಸಕ್ರಿಯ ಪ್ರಕರಣಗಳಿವೆ.ಬಾಗಲಕೋಟೆ, ಕೊಪ್ಪಳ, ಬೀದರ್,ಚಿಕ್ಕಬಳ್ಳಾಪುರ, ಗದಗ,ಉಡುಪಿ, ವಿಜಯಪುರ ಜಿಲ್ಲೆಯಲ್ಲಿ ಶೂನ್ಯ ಪ್ರಕರಣ.
ಬೆಂಗಳೂರುನಗರ 122, ಮೈಸೂರು 6, ಬೆಳಗಾವಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 5, ಚಾಮರಾಜನಗರ, ತುಮಕೂರು ರಾಮನಗರ ಜಿಲ್ಲೆಯಲ್ಲಿ ತಲಾ 4,ಚಿತ್ರದುರ್ಗ 5, ಕಲಬುರಗಿ, ದಕ್ಷಿಣಕನ್ನಡ, ಯಾದಗಿರಿ ಜಿಲ್ಲೆಯಲ್ಲಿ ತಲಾ 3, ಧಾರವಾಡ, ಹಾಸನ, ಕೊಡಗು, ರಾಯಚೂರು,ಬಳ್ಳಾರಿ ತಲಾ 2, ಕೋಲಾರ, ಮಂಡ್ಯ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ,ದಾವಣಗೆರೆ,ಹಾವೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣ ದಾಖಲಾಗಿದೆ.