Advertisement

Karnataka: ಪೊಲೀಸ್‌ ಇಲಾಖೆಯ 1700 ವಾಹನಗಳು ಗುಜರಿಗೆ- ಡಾ| ಜಿ. ಪರಮೇಶ್ವರ್‌

11:15 PM Dec 05, 2023 | Team Udayavani |

ಬೆಳಗಾವಿ: ಪೊಲೀಸ್‌ ಇಲಾಖೆಯಲ್ಲಿ 1,700 ವಾಹನಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿದ್ದು, ಅವುಗಳಿಗೆ ಬದಲಿ ವಾಹನ ಖರೀದಿಸಲು 100 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ತಿಳಿಸಿದರು.

Advertisement

ತರೀಕೆರೆ ಕಾಂಗ್ರೆಸ್‌ ಶಾಸಕ ಜಿ.ಎಚ್‌. ಶ್ರೀನಿವಾಸ್‌ ಹಾಗೂ ಮಸ್ಕಿ ಶಾಸಕ ಬಸನಗೌಡ ತುರುವೀಹಾಳ್‌ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಕರ್ನಾಟಕ ರಾಜ್ಯ ಅಗ್ನಿಶಾಮಕ ಠಾಣೆ ಮತ್ತು ತುರ್ತು ಸೇವಾ ಇಲಾಖೆಯಲ್ಲಿ 15 ವರ್ಷಗಳ ಹಳೆಯ ವಾಹನಗಳನ್ನು ಅನುಪಯುಕ್ತಗೊಳಿಸುವ ಹಾಗೂ ಬದಲಿ ವಾಹನಗಳ ಖರೀದಿ ಸಂಬಂಧವೂ ಅಧಿಕಾರಿಗಳಿಗೊಂದಿಗೆ ಸಭೆ ನಡೆಸಲಾಗಿದೆ. ಆದರೆ, ಅವಧಿ ಮೀರಿಯೂ ಸುಸ್ಥಿತಿಯಲ್ಲಿರುವ ವಾಹನಗಳನ್ನು ನಿರುಪಯುಕ್ತಗೊಳಿಸಿದರೆ ಇಲಾಖೆಯ ಮೂಲ ಚಟುವಟಿಕೆಗೆ ತೊಂದರೆ ಆಗುವುದರಿಂದ ಅಂತಹ ವಾಹನಗಳ ನೋಂದಣಿ ಪತ್ರ ನವೀಕರಿಸಲು ಕೇಂದ್ರ ಸರಕಾರಕ್ಕೆ ಅನುಮತಿ ಕೋರಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next