Advertisement

ಕೋವಿಡ್: ಬೀದರ-ಯಾದಗಿರಿಯಲ್ಲಿ ಶೂನ್ಯ ಪ್ರಕರಣ: ರಾಜ್ಯದಲ್ಲಿಂದು 2214 ಸೋಂಕಿತರು ಗುಣಮುಖ

06:44 PM Jul 21, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿ ( ದಿನಾಂಕ: 20:07:2021, 00:00 ರಿಂದ 23:59 ರವರೆಗೆ) ಯಲ್ಲಿ ಹೊಸದಾಗಿ 1639 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 36 ಜನರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಜು.21) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಇನ್ನು ವರದಿಗಳ ಪ್ರಕಾರ 2214 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2826411ಕ್ಕೆ ತಲುಪಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-3, ಬಳ್ಳಾರಿ-14, ಬೆಳಗಾವಿ-61, ಬೆಂಗಳೂರು ಗ್ರಾಮಾಂತರ-25, ಬೆಂಗಳೂರು ನಗರ-419, ಬೀದರ್-0, ಚಾಮರಾಜನಗರ-22, ಚಿಕ್ಕಬಳ್ಳಾಪುರ-15, ಚಿಕ್ಕಮಗಳೂರು-92, ಚಿತ್ರದುರ್ಗ-29, ದಕ್ಷಿಣ ಕನ್ನಡ-190, ದಾವಣಗೆರೆ-13,  ಧಾರವಾಡ-19, ಗದಗ-1, ಹಾಸನ-141, ಹಾವೇರಿ-2, ಕಲಬುರಗಿ-2, ಕೊಡಗು-63, ಕೋಲಾರ-35, ಕೊಪ್ಪಳ-5, ಮಂಡ್ಯ-60, ಮೈಸೂರು-160, ರಾಯಚೂರು-1, ರಾಮನಗರ-5, ಶಿವಮೊಗ್ಗ-37, ತುಮಕೂರು-63, ಉಡುಪಿ-104, ಉತ್ತರ ಕನ್ನಡ-48, ವಿಜಯಪುರ-10, ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next